ಬಸ್ ನಿಲ್ದಾಣದಲ್ಲಿ 40ಸಾವಿರ ರೂ. ಸಿಕ್ಕಾಗ ಆತನ ಕಿಸೆಯಲ್ಲಿದ್ದ ಹಣ ಬರೇ 3 ರೂ… ಮುಂದೇನಾಯ್ತು?
Team Udayavani, Nov 4, 2019, 10:27 AM IST
Representative Image
ಪುಣೆ:ಪುಕ್ಸಟ್ಟೆ ಹಣ ಸಿಕ್ಕಿದರೆ ಯಾರಿಗೆ ಬೇಡ…ಆದರೆ ಬಸ್ ಸ್ಟ್ಯಾಂಡ್, ರಿಕ್ಷಾದಲ್ಲಿ ಬಿಟ್ಟು ಹೋದ ಹಣ, ಚಿನ್ನವನ್ನು ವಾಪಸ್ ಮಾಲೀಕರಿಗೆ ಒಪ್ಪಿಸಿದ ಅಪರೂಪದ ಪ್ರಾಮಾಣಿಕತೆ ಘಟನೆಗಳ ಬಗ್ಗೆ ಓದಿದ್ದೀರಿ, ಕೇಳಿದ್ದೀರಿ. ಆದರೆ ಮಹಾರಾಷ್ಟ್ರ ಸತಾರಾದ 54 ವರ್ಷದ ಈ ವ್ಯಕ್ತಿ ಮತ್ತೊಂದು ಸೇರ್ಪಡೆ. ಅಷ್ಟೇ ಅಲ್ಲ ಅವರ ಪ್ರಾಮಾಣಿಕತೆಗೆ ನೀವೂ ಒಂದು ಸಲಾಂ ಹೇಳುತ್ತೀರಿ.
ಹೌದು ಮಹಾರಾಷ್ಟ್ರ ಸತಾರಾದ ಧಾನಾಜಿ ಜಗದಾಳೆ (54) ಎಂಬವರಿಗೆ ದೀಪಾವಳಿ ಹಬ್ಬದಂದು ಬಸ್ ನಿಲ್ದಾಣದಲ್ಲಿ 40 ಸಾವಿರ ರೂಪಾಯಿ ಇದ್ದ ಹಣದ ಕಂತೆಯೊಂದು ಸಿಕ್ಕಿತ್ತು. ಕೊನೆಗೂ ಅದನ್ನು ಹಣ ಕಳೆದುಕೊಂಡ ವ್ಯಕ್ತಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ವೇಳೆ ಜಗದಾಳೆ ಅವರ ಪ್ರಾಮಾಣಿಕತೆ ಮೆಚ್ಚಿ ಒಂದು ಸಾವಿರ ರೂಪಾಯಿ ಬಹುಮಾನ ನೀಡಿದ್ದರು. ಆದರೆ ಜಗದಾಳೆ ತೆಗೆದುಕೊಂಡಿದ್ದು ಬರೇ 7 ರೂಪಾಯಿ ಮಾತ್ರ. ಅದು ಯಾಕೆ ಗೊತ್ತಾ…ಆ ಸಮಯದಲ್ಲಿ ಅವರ ಪಾಕೆಟ್ ನಲ್ಲಿದ್ದ ಹಣ 3 ರೂ. ಮಾತ್ರ. ಸತಾರಾದ ಮಾನ್ ತಾಲೂಕಿನ ಪಿಂಗಾಲಿ ಗ್ರಾಮಕ್ಕೆ ಹೋಗಬೇಕಾದರೆ ಬಸ್ ಟಿಕೆಟ್ ದರ ಹತ್ತು ರೂಪಾಯಿ. ಅದಕ್ಕಾಗಿ ಏಳು ರೂಪಾಯಿ ಪಡೆದಿದ್ದರು!
ದೀಪಾವಳಿ ಹಿನ್ನೆಲೆಯಲ್ಲಿ ಕೆಲಸದ ನಿಮಿತ್ತ ದಹಿವಾಡಿಗೆ ಹೋಗಿ ವಾಪಸ್ ಬಸ್ ನಿಲ್ದಾಣಕ್ಕೆ ಬಂದಿದ್ದೆ. ಆಗ ಸಮೀಪದಲ್ಲೇ ನೋಟಿನ ಕಂತೆಗಳು ಬಿದ್ದಿರುವುದನ್ನು ಗಮನಿಸಿದೆ. ಸುತ್ತಮುತ್ತ ಇದ್ದ ಜನರಲ್ಲಿ ಕೇಳಿದೆ ಈ ಹಣ ಯಾರದ್ದು ಅಂತ. ಆಗ ಹಣ ಕಳೆದು ಹೋದ ಚಿಂತೆಯಲ್ಲಿದ್ದ ವ್ಯಕ್ತಿ ಸಿಕ್ಕಿದ್ದರು. ಅವರು ಪತ್ನಿಯ ಆಪರೇಶನ್ ಗಾಗಿ 40ಸಾವಿರ ರೂಪಾಯಿ ತಂದಿದ್ದು, ಅದು ಕೆಳಕ್ಕೆ ಜಾರಿ ಬಿದ್ದಿತ್ತು. ನಾನು ಕೂಡಲೇ ಅವರಿಗೆ ಹಣದ ಕಂತೆಯನ್ನು ನೀಡಿದೆ ಎಂದು ಜಗದಾಳೆ ಘಟನೆಯನ್ನು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ನನಗೆ ಅವರು ಒಂದು ಸಾವಿರ ರೂಪಾಯಿ ನೀಡಿದರು. ಆದರೆ ನಾನು 7 ರೂಪಾಯಿ ಮಾತ್ರ ತೆಗೆದುಕೊಂಡೆ, ಯಾಕೆಂದರೆ ನನ್ನ ಊರಿಗೆ ಹೋಗಬೇಕಾದರೆ ಬಸ್ ಟಿಕೆಟ್ ಬೆಲೆ ಹತ್ತು ರೂಪಾಯಿ, ನನ್ನಲ್ಲಿ ಇದ್ದದ್ದು ಬರೇ 3 ರೂಪಾಯಿ ಮಾತ್ರ ಎಂದು ಧಾನಾಜಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!