ಮೊಸಳೆಯ ತೆರವಿಗೆ ವಿರೋಧ
Team Udayavani, Jun 24, 2019, 5:02 AM IST
ಅಹಮದಾಬಾದ್/ವಡೋದರಾ: ಗುಜರಾತ್ನ ಮಹೀಸಾಗರ್ ಜಿಲ್ಲೆಯ ಪಲ್ಲ ಗ್ರಾಮ ದಲ್ಲಿ ಖೋಡಿಯಾರ್ ಮಾತಾ ದೇಗುಲಕ್ಕೆ ಮೊಸಳೆ ನುಗ್ಗಿದೆ. ಗರ್ಭಗುಡಿಗೆ ಪ್ರವೇಶ ಮಾಡಿದ್ದ ಆರು ಅಡಿಯ ಜಲಜೀವಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾಕುಬೇಕಾಯಿಕು. ಪಟೇಲ್ ಸಮುದಾಯದ ಆರಾಧ್ಯ ದೇವಿ ಮೊಸಳೆಯನ್ನೇರಿ ಸಂಚಾರ ಮಾಡುತ್ತಾಳೆ ಎನ್ನುವುದು ಭಕ್ತರ ನಂಬಿಕೆ.
ದೇಗುಲದೊಳಕ್ಕೆ ಜಲಜೀವಿ ಪ್ರವೇಶ ಮಾಡಿದೆ ಎಂಬ ವಿಚಾರ ತಿಳಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ.ಪರ್ಮಾರ್ ಪಲ್ಲ ಗ್ರಾಮಕ್ಕೆ ತೆರಳಿದ್ದರು. ಅಷ್ಟರಲ್ಲಾಗಲೇ ಅಲ್ಲಿ ಸಾವಿರಾರು ಮಂದಿ ಸೇರಿದ್ದರು. ಜತೆಗೆ ಕಾರ್ಯಾ ಚರಣೆಗೂ ಅಡ್ಡಿಪಡಿಸಿದರು. ಗ್ರಾಮ ಸ್ಥರ ಜತೆಗೆ ಮಾತುಕತೆ ನಡೆಸಿ ಗರ್ಭಗುಡಿಗೆ ತೆರಳಿ ಅರಣ್ಯಾಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿವಲ್ಲಿ ಯಶಸ್ವಿಯಾದರು. ಅನಂತರ ಅದನ್ನು ದೂರ ಪ್ರದೇಶಕ್ಕೆ ಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ