ಗಾಂಧಿ-ಮೋದಿ ಕಲಾಕೃತಿ 25 ಲಕ್ಷ ರೂ.ಗೆ ಮಾರಾಟ
ಪ್ರಧಾನಿಯ ಉಡುಗೊರೆಗಳ ಇ-ಹರಾಜು ಮುಕ್ತಾಯ
Team Udayavani, Oct 26, 2019, 6:45 AM IST
ಹೊಸದಿಲ್ಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಪ್ರಧಾನ ನಿರ್ದೇಶಕ ಅದ್ವೆ„ತ ಗದಾನಾಯಕ್ ಅವರು ಮಹಾತ್ಮಾ ಹಾಗೂ ಪ್ರಧಾನಿ ಮೋದಿ ಅವರಿರುವ ಕಲಾಕೃತಿಯನ್ನು ವೀಕ್ಷಿಸಿದರು.
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿರುವ ಸ್ಮರಣಿಕೆಗಳು ಹಾಗೂ ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದ್ದು, ಮೋದಿ ಅವರು ಮಹಾತ್ಮ ಗಾಂಧಿ ಜೊತೆಗೆ ಇರುವಂಥ ಕಲಾಕೃತಿಯೊಂದಕ್ಕೆ ಬರೋಬ್ಬರಿ 25 ಲಕ್ಷ ರೂ. ಬಿಡ್ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಇ-ಹರಾಜಿನಿಂದ ಬಂದ ಎಲ್ಲ ಹಣವನ್ನೂ ನಮಾಮಿ ಗಂಗೆ ಯೋಜನೆಗೆ ದೇಣಿಗೆಯಾಗಿ ನೀಡಲಾಗುತ್ತದೆ ಎಂದೂ ಸರಕಾರ ಹೇಳಿದೆ. ಮೋದಿಯವರಿಗೆ ಉಡುಗೊರೆಯಾಗಿ ಬಂದ ಒಟ್ಟು 2,772 ಸ್ಮರಣಿಕೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ಸೆ.14ರಿಂದ ಆರಂಭವಾಗಿತ್ತು. ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಈ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಲಾಕೃತಿಗಳು, ವಾಸ್ತುಶಿಲ್ಪಗಳು, ಶಾಲುಗಳು, ಜಾಕೆಟ್ಗಳು, ಸಾಂಪ್ರದಾಯಿಕ ಸಂಗೀತ ಉಪಕರಣಗಳು ಸೇರಿದಂತೆ ಹಲವು ಉಡು ಗೊರೆಗಳು ಇದರಲ್ಲಿದ್ದವು. ಆರಂಭದಲ್ಲಿ, ಅಕ್ಟೋಬರ್ 3ರವರೆಗೆ ಮಾತ್ರ ಇ-ಹರಾಜು ನಡೆಸಲು ಉದ್ದೇಶಿಸಲಾಗಿತ್ತು. ಅನಂತರ ಅದನ್ನು 3 ವಾರಗಳ ಕಾಲ ವಿಸ್ತರಿಸಲಾಗಿತ್ತು. ಈಗ ಎಲ್ಲ ವಸ್ತುಗಳೂ ಮಾರಾಟವಾಗಿವೆ ಎಂದು ಸರಕಾರ ಹೇಳಿದೆ.
500 ರೂ.ನಿಂದ 2.5 ಲಕ್ಷ ರೂ.: ಕನಿಷ್ಠ ಎಂದರೆ 500 ರೂ. ಮೂಲ ದರದಿಂದ ಗರಿಷ್ಠ 2.5 ಲಕ್ಷ ರೂ.ವರೆಗಿನ ಮೂಲ ದರವನ್ನು ವಿಧಿಸಲಾಗಿತ್ತು. ಗಣಪತಿಯ ಸಣ್ಣ ವಿಗ್ರಹ, ಕಮಲದ ಆಕೃತಿಯ ಮರದ ಪೆಟ್ಟಿಗೆಗೆ 500 ರೂ. ಮೂಲ ದರ ನಿಗದಿಪಡಿಸಲಾಗಿತ್ತು. ಇನ್ನು ಮಹಾತ್ಮ ಗಾಂಧಿ ಹಾಗೂ ಪ್ರಧಾನಿ ಮೋದಿ ಒಟ್ಟಿಗೇ ನಿಂತಿರುವ ಹಿಂಬದಿಯಲ್ಲಿ ತ್ರಿವರ್ಣ ಧ್ವಜ ಕಾಣುವಂಥ ಆ್ಯಕ್ರಿಲಿಕ್ ಪೇಂಟಿಂಗ್ಗೆ ಗರಿಷ್ಠ ಅಂದರೆ 2.5 ಲಕ್ಷ ರೂ. ಮೂಲ ದರ ನಿಗದಿಪಡಿಸಲಾಗಿತ್ತು. ಈ ಕಲಾಕೃತಿ ಈಗ 25 ಲಕ್ಷ ರೂ.ಗಳಿಗೆ ಮಾರಾಟವಾಗಿದೆ. ಆದರೆ, ಈ ಕಲಾಕೃತಿಯನ್ನು ರಚಿಸಿದ್ದು ಯಾರು ಮತ್ತು ಅದನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದು ಯಾರು ಎಂಬ ಮಾಹಿತಿಯನ್ನು ಸರಕಾರ ಬಹಿರಂಗಪಡಿಸಿಲ್ಲ.
ಅಮ್ಮನ ಜತೆಗಿನ ಫೋಟೋಗೆ 20 ಲಕ್ಷ ರೂ.
ತಾಯಿ ಹೀರಾಬೆನ್ ಅವರು ಪ್ರಧಾನಿ ಮೋದಿಯವರನ್ನು ಆಶೀರ್ವದಿಸುತ್ತಿರುವ ಫೋಟೋವೊಂದಕ್ಕೆ ಒಂದು ಸಾವಿರ ರೂ. ಮೂಲ ದರ ವಿಧಿಸಲಾಗಿತ್ತು. ಅದು 20 ಲಕ್ಷ ರೂ.ಗಳಿಗೆ ಬಿಡ್ ಆಗಿದೆ. ಮಣಿಪುರಿ ಜನಪದ ಕಲೆ (ಮೂಲ ದರ 50,000) 10 ಲಕ್ಷ ರೂ.ಗೆ, ಕರುವಿಗೆ ಹಾಲು ಕೊಡುತ್ತಿರುವ ಹಸುವಿನ ಲೋಹದ ಶಿಲ್ಪ(ಮೂಲ ದರ 4,000 ರೂ.) 10 ಲಕ್ಷ ರೂ.ಗೆ, ಸ್ವಾಮಿ ವಿವೇಕಾನಂದರ 14 ಸೆ.ಮೀ.ನ ಲೋಹದ ಪ್ರತಿಮೆ(ಮೂಲ ದರ 4,000 ರೂ.) 6 ಲಕ್ಷ ರೂ.ಗಳಿಗೆ ಮಾರಾಟವಾಗಿದೆ ಎಂದೂ ಸರಕಾರದ ಪ್ರಕಟನೆ ತಿಳಿಸಿದೆ. ಹರಾಜಿನಿಂದ ಒಟ್ಟಾರೆ ಎಷ್ಟು ಮೊತ್ತ ಸಂಗ್ರಹವಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ