ಶ್ರೀನಗರ: ರಂಜಾನ್ ದಿನವೂ ದೇಶದ್ರೋಹಿ ಕೃತ್ಯ ; ಉಗ್ರ ಪರ ಪೋಸ್ಟರ್ಗಳು
ಕಲ್ಲು ತೂರಾಟ, ಮೊಳಗಿದ ಕಾಶ್ಮೀರ್ ಬನೇಗಾ ಪಾಕಿಸ್ಥಾನ್ ಘೋಷಣೆಗಳು....
Team Udayavani, Jun 5, 2019, 12:19 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರಂಜಾನ್ನ ಪವಿತ್ರ ದಿನದಂದು ದೇಶದ್ರೋಹಿ ಕೃತ್ಯಗಳು ನಡೆಸಲಾಗುತ್ತಿದ್ದು, ಶ್ರೀನಗರದ ಮಸೀದಿ ಬಳಿ ಭದ್ರತಾ ಸಿಬಂದಿಗಳತ್ತ ಕಲ್ಲು ತೂರಾಟ ನಡೆಸಲಾಗಿದೆ.
ಉಗ್ರರಾದ ಝಾಕೀರ್ ಮೂಸಾ ಮತ್ತು ಮಸೂದ್ ಅಜರ್ ರನ್ನುಬೆಂಬಲಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ.
ನೂರಾರು ಯುವಕರು ಹಿಂಸೆಗೆ ಮುಂದಾಗಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೂಸಾ ಆರ್ಮಿ ಎಂಬ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದಾರೆ.
ಕಾಶ್ಮೀರ್ ಬನೇಗಾ ಪಾಕಿಸ್ಥಾನ್ ಪೋಸ್ಟರ್ನಲ್ಲಿ ಮಸೂದ್ ಅಜರ್ ಚಿತ್ರ ಕಂಡು ಬಂದಿದೆ.
ಕಾಶ್ಮೀರದೆಲ್ಲೆಡೆ ಭದ್ರತಾ ಪಡೆಗಳು ಬಿಗಿ ಭದ್ರತೆಕೈಗೊಂಡಿವೆ.