3 ಜಾತಿಗೆ ಆದ್ಯತೆ: ನೋಟಿಸ್
Team Udayavani, Dec 27, 2018, 6:25 AM IST
ನವದೆಹಲಿ:ರಾಷ್ಟ್ರಪತಿ ಅಂಗರಕ್ಷಕ ಹುದ್ದೆಗೆ ನಿಗದಿತ ಮೂರು ಜಾತಿಗಳಿಗೆ ಮಾತ್ರ ಆದ್ಯತೆ ನೀಡಲಾಗಿತ್ತು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ಭೂಸೇನೆಯ ಮುಖ್ಯಸ್ಥರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿ, ನಾಲ್ಕು ವಾರಗಳಲ್ಲಿ ನೇಮಕ ಪ್ರಕ್ರಿಯೆಯ ವಿವರಣೆ ನೀಡುವಂತೆ ಬುಧವಾರ ಸೂಚಿಸಿದೆ. ಹರ್ಯಾಣದ ನಿವಾಸಿ ಗೌರವ್ ಯಾದವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ನೇಮಕ ಕ್ರಮ ಸಂವಿಧಾನದ 14ನೇ ಮತ್ತು 15 (1) ವಿಧಿಗಳ ಪೂರ್ಣ ಪ್ರಮಾಣದ ಉಲ್ಲಂಘನೆ ಎಂದು ಅರ್ಜಿದಾರರು ವಾದಿಸಿದ್ದಾರೆ.