CBSE ಟಾಪರ್ಗೆ ಫೋನ್ನಲ್ಲಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
Team Udayavani, Jul 28, 2020, 6:30 AM IST
ಕೊಚ್ಚಿ: ‘ಶಭಾಸ್ ವಿನಾಯಕ, ಶಭಾಸ್, ಹೇಗಿದೆ ಜೋಶ್?’, ಅನಿರೀಕ್ಷಿತವಾಗಿ ಬಂದ ಈ ಮಾತುಗಳನ್ನು ಕೇಳಿದಾಗ ವಿನಾಯಕ ಎಂ. ಮಲಿಲ್ಗೆ ಹೇಳಿಕೊಳ್ಳಲಾರದಷ್ಟು ಸಂತೋಷ.
ಕಾರಣ, ಈ ರೀತಿ ಕುಶಲೋಪರಿ ವಿಚಾರಿಸಿದ್ದು, ಈ ದೇಶದ ಪ್ರಧಾನಿ, ನರೇಂದ್ರ ಮೋದಿ.
ಇಡುಕ್ಕಿಯ ನೆರಿಯಾಮಂಗಲಮ್ ನಿವಾಸಿಯಾಗಿರುವ ವಿನಾಯಕ, ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ.
ಈ ಸಲದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್ ಮತ್ತು ಇನ್ಫಾರ್ಮೇಷನ್ ಪ್ರ್ಯಾಕ್ಟೀಸ್ಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾನೆ. ಎಸ್ಸಿ/ಎಸ್ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾನೆ.
ಈ ಹಿನ್ನೆಲೆಯಲ್ಲಿ ಮೋದಿಯವರು ರವಿವಾರ ತಮ್ಮ ‘ಮನ್ ಕಿ ಬಾತ್’ನ ಅಂಗವಾಗಿ ವಿನಾಯಕನಿಗೆ ಕರೆ ಮಾಡಿದರು.
ದಿಲ್ಲಿಗೆ ಬರಲು ಇಚ್ಛಿಸುತ್ತೀಯಾ ಎಂದು ಮೋದಿಯವರು ಕೇಳಿದಾಗ, ಹೌದು, ಬಿ.ಕಾಂ.ಮಾಡಲು ಉದ್ದೇಶಿಸಿದ್ದೇನೆ.
ಇದಕ್ಕಾಗಿ ದಿಲ್ಲಿ ವಿವಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದ. ಅಲ್ಲದೆ, ತನ್ನ ಹವ್ಯಾಸಗಳ ಬಗ್ಗೆಯೂ ತಿಳಿಸಿದ. ವಿನಾಯಕನ ತಂದೆ ಮನೋಜ್ ಮಲಿಲ್, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ