‘ನಮಸ್ಕಾರ್ ನಾರಾಯಣ್ ಜೀ, ಕೈಸೇ ಹೈ..’: ನಮೋ ಕರೆ ಮಾಡಿದ ಆ 106 ವರ್ಷದ ವ್ಯಕ್ತಿ ಯಾರು?

ಪಕ್ಷದ ಶತಾಯುಷಿ ನಾಯಕನನ್ನು ನೆನಪಿಸಿಕೊಂಡು ಕರೆ ಮಾಡಿ ಆಶೀರ್ವಾದ ಪಡೆದ ನಮೋ!

Team Udayavani, Apr 22, 2020, 10:35 PM IST

‘ನಮಸ್ಕಾರ್ ನಾರಾಯಣ್ ಜೀ, ಕೈಸೇ ಹೈ..’: ನಮೋ ಕರೆ ಮಾಡಿದ ಆ 106 ವರ್ಷದ ವ್ಯಕ್ತಿ ಯಾರು?

ನವದೆಹಲಿ: ಉತ್ತರಪ್ರದೇಶದ ಖುಷಿ ನಗರ ಜಿಲ್ಲೆಯಲ್ಲಿರುವ ಪಗಾರ್ ಗ್ರಾಮದ ರಾಮ್ ಕೋಲಾ ಬ್ಲಾಕ್ ನಲ್ಲಿ ವಾಸವಾಗಿರುವ ಆ ಶತಾಯುಷಿ ಅಜ್ಜನಿಗೆ ಇಂದು ಬೆಳ್ಳಂಬೆಳಿಗ್ಗೆ ಫೋನ್ ಕರೆಯೊಂದು ಬರುತ್ತದೆ.

ಕರೆ ಸ್ವೀಕರಿಸಿದ ಅವರ ಮರಿ ಮೊಮ್ಮಗ ಕನ್ಹಯ್ಯಾನಿಗೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ಯಾಕೆಂದರೆ ಆ ದೂರವಾಣಿ ಕರೆ ಬಂದಿದ್ದು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿಯವರ ಕಛೇರಿಯಿಂದ.

ಕರೆ ಮಾಡಿದ ಪ್ರದಾನ ಮಂತ್ರಿಯವರ ಕಛೇರಿ ಅಧಿಕಾರಿಗಳು, ಪ್ರಧಾನಿಯವರು ಶ್ರೀನಾರಾಯಣ ಅವರಲ್ಲಿ ಮಾತನಾಡಬೇಕೆಂದು ತಿಳಿಸಿದಾಗ ತಬ್ಬಿಬ್ಬಾದ ಆ ಯುವಕ ಫೋನನ್ನು ಈ ಶತಾಯುಷಿ ಅಜ್ಜನ ಕೈಗೆ ಕೊಡುತ್ತಾನೆ.

ಬೆಳಗಿನ ಬಿಸಿ ಚಹಾ ಕುಡಿಯುತ್ತಿದ್ದ ಅಜ್ಜ ಆಶ್ಚರ್ಯದಿಂದ ಫೋನನ್ನು ಕೈಗೆತ್ತಿಕೊಂಡಾಗ ಕಾದಿತ್ತು ಆಶ್ಚರ್ಯ, ಆ ಕಡೆಯಿಂದ ಸ್ವತಃ ದೇಶದ ಪ್ರಧಾನಿಯೇ ಮಾತನಾಡುತ್ತಿದ್ದಾರೆ!

ಮೊದಲ ಸಂಭಾಷಣೆಯಲ್ಲೇ ಮೋದಿ ಅವರು ‘ನಮಸ್ಕಾರ್ ನಾರಾಯಣ್ ಜೀ.. ಕೈಸೇ ಹೈ? (ನಮಸ್ಕಾರ ನಾರಾಯಣ ಜೀ, ಹೇಗಿದ್ದೀರಿ) ಎಂದು ಕೇಳುತ್ತಾರೆ. ಉಭಯ ಕುಶಲೋಪರಿಯೆಲ್ಲಾ ಮುಗಿದ ಬಳಿಕ ಪ್ರಧಾನಿಯವರು ಲಘು ಹಾಸ್ಯದ ಧಾಟಿಯಲ್ಲಿ ನಿಮಗೀಗ ನೂರು ವರ್ಷ ದಾಟಿರಬೇಕಲ್ಲವೇ ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಆ ಅಜ್ಜ ನಗುತ್ತಾ ‘106 ಹೋ ಗಯಾ ಹೈ’ (ನನಗೀಗ 106 ವರ್ಷ) ಎಂದು ಪ್ರತಿಕ್ರಿಯಿಸುತ್ತಾರೆ.

ಹಾಗಾದರೆ ನೀವು ಸುಮಾರು ಐದು ತಲೆಮಾರುಗಳನ್ನು ಕಂಡಿರಬೇಕಲ್ಲವೇ ಎಂದು ಪ್ರಧಾನಿಯವರು ಕೇಳಿದಾಗ ನಾರಾಯಣ ಅವರು ಹೌದೆಂದು ಉತ್ತರಿಸುತ್ತಾರೆ. ‘ನಿಮ್ಮನ್ನು ಕಂಡು ಬಹಳಷ್ಟು ವರ್ಷಗಳೇ ಕಳೆದು ಹೋಯಿತು. ಇಂದೇಕೋ ನಿಮ್ಮನ್ನು ಬಹಳ ನೆನಪು ಮಾಡಿಕೊಂಡೆ, ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಿಮ್ಮ ಜೊತೆ ಮಾತನಾಡಿ ನಿಮ್ಮ ಆಶೀರ್ವಾದ ಪಡೆಯಬೆಕೆನ್ನಿಸಿತು’ ಎಂದು ಮೋದಿ ಹೇಳಿದಾಗ ಆ ಅಜ್ಜನ ಬಾಯಿಯಿಂದ ಮಾತೇ ಹೊರಡಲಿಲ್ಲ.

ಯಾರು ಈ ಶತಾಯುಷಿ ಅಜ್ಜ? ಮೋದಿಗೂ ಇವರಿಗೂ ಏನು ಸಂಬಂಧ?
ಅಂದ ಹಾಗೆ ಈ ಶತಾಯುಷಿ ಶ್ರೀ ನಾರಾಯಣ ಅವರು ಯಾರು ಮತ್ತು ಅವರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಏನು ಸಂಬಂಧ ಎಂದು ಕೇಳಿದರೆ ಅದೊಂದು ಹಳೆಯ ನೆನಪುಗಳ ಕಥೆ.

ಜನಸಂಘದ ದಿನಗಳಿಂದಲೂ ಆ ಕಾಲದ ಹಿರಿಯ ನಾಯಕರುಗಳಾಗಿದ್ದ ಶ್ಯಾಮ ಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದವರ ಒಡನಾಡಿಯಾಗಿದ್ದ ಶ್ರೀ ನಾರಾಯಣ ಅವರು ಎರಡು ಬಾರಿ ಶಾಸಕರಾಗಿದ್ದವರು. ನಾರಾಯಣ ಭಾಯ್ ಅಥವಾ ಭುಲಾಯ್ ಭಾಯ್ ಎಂದೇ ರಾಜಕೀಯ ವಲಯದಲ್ಲಿ ಪರಿಚಿತರಾಗಿದ್ದ ಇವರಿಗೂ ನರೇಂದ್ರ ಮೋದಿ ಅವರಿಗೂ ಸಂಘದ ದಿನಗಳಲ್ಲಿ ನಂಟು ಬೆಳೆದುಬಿಟ್ಟಿತ್ತು.

ಶ್ರೀ ನಾರಾಯಣ್ ಅವರು ಅಂದಿನ ನೌರಂಗಿಯಾ ವಿಧಾನ ಸಭಾ ಕ್ಷೇತ್ರದಿಂದ 1974 ಹಾಗೂ 1977ರಲ್ಲಿ ಎರಡು ಬಾರಿ ಶಾಸಕರಾಗಿ ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದೀಗ ಈ ಕ್ಷೇತ್ರ ಖಡ್ಡಾ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ.

ಶ್ರೀ ನಾರಾಯಣ್ ಅವರು ಸುಮಾರು 50 ವರ್ಷಗಳ ಹಿಂದೆ, ಮೋದಿ ಅವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಸಂದರ್ಭದಲ್ಲಿ ಅವರನ್ನು ಮೊದಲ ಸಲ ಭೇಟಿ ಮಾಡಿದ್ದರೆಂಬುದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಕಟ್ಟಾ ಕಾರ್ಯಕರ್ತ ಹಾಗೂ ನಾಯಕನನ್ನು ನೆನಪಿನಲ್ಲಿಟ್ಟುಕೊಂಡು ಈ ಸಂಕಷ್ಟದ ಸಂದರ್ಭದಲ್ಲಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಆ ಶತಾಯುಷಿ ಜೀವದ ಆಶೀರ್ವಾದವನ್ನು ಪಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಆ ಒಂದು ಕರೆ ಶತಾಯುಷಿ ಅಜ್ಜನ ಮುಖದಲ್ಲಿ ಸಾರ್ಥಕತೆ ಭಾವನೆಯೊಂದು ಮೂಡಲು ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.