ಪುಲ್ವಾಮಾ ದಾಳಿ ಸಂಚುಕೋರರ ಅಬ್ದುಲ್ ರಶೀದ್ ಗಾಜಿ ಇರುವಿಕೆ ಪತ್ತೆ ?
Team Udayavani, Feb 16, 2019, 5:45 AM IST
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಯ ಮುಖ್ಯ ಸಂಚುಕೋರ ಅಬ್ದುಲ್ ರಶೀದ್ ಗಾಜಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆತನು ಪುಲ್ವಾಮಾ ಅಥವಾ ತ್ರಾಲ್ ಸಮೀದದ ಅರಣ್ಯದಲ್ಲಿ ಒಂದೆಡೆ ಅವಿತುಕೊಂಡೇ ಪುಲ್ವಾಮಾ ಪಿತೂರಿ ಮತ್ತು ದಾಳಿ ಯೋಜನೆ ಮಾಡಿರುವುದಾಗಿ ಭದ್ರತಾ ಪಡೆಗಳು ಶಂಕಿಸಿವೆ.
ಗಾಜಿ ಗೆ ಪಾಕಿಸ್ಥಾನದಲ್ಲಿರುವ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನಿಂದ ನೇರವಾಗಿ ನಿರ್ದೇಶಗಳು ಬರುತ್ತಿದ್ದುದಾಗಿ ಶಂಕಿಸಲಾಗಿದೆ. ಭಾರತದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಉಗ್ರ ದಾಳಿ ನಡೆಸುವುದೇ ಮಸೂದ್ ಅಜರ್ ನ ಮಹತ್ವಾಕಾಂಕ್ಷೆಯಾಗಿತ್ತು ಎಂದು ತಿಳಿಯಲಾಗಿದೆ.
ಗಾಜಿಯನ್ನು ಜೀವಂತ ಸೆರೆ ಹಿಡಿಯವ ಪ್ರಯತ್ನಗಳು ಈಗ ನಡೆಯುತ್ತಿದ್ದು ಭದ್ರತಾ ಪಡೆಗಳಿಗೆ ಇದರಲ್ಲಿ ಯಶಸ್ಸು ಸಿಗುವ ವಿಶ್ವಾಸವಿದೆ.
ಜೈಶ್ ಉಗ್ರ ಸಂಘಟನೆ ಭಾರತೀಯ ಯೋಧರನ್ನು ಅಥವಾ ಭದ್ರತಾ ಸೌಕರ್ಯವನ್ನು ಗುರಿ ಇರಿಸಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಂಭವವಿದೆ ಎಂಬ ಗುಪ್ತಚರ ಮಾಹಿತಿ ತಿಂಗಳ ಹಿಂದೆಯೇ ಇತ್ತಾದರೂ ಇದನ್ನು ಸಾಮಾನ್ಯ ಮಾಹಿತಿ ಎಂದು ತಿಳಿಯಲಾಗಿತ್ತೆಂಬ ಶಂಕೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ