ಶೀಘ್ರವೇ ರೈಲೂಟದಲ್ಲಿ ಬದಲಾವಣೆ
Team Udayavani, Jun 6, 2018, 5:15 AM IST
ಸದ್ಯದಲ್ಲೇ ನೀವು ರೈಲುಗಳಲ್ಲಿ ಸಿಗುವ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೀರಿ. ರೈಲುಗಳಲ್ಲಿ ಪೂರೈಕೆಯಾಗುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿರುವುದರಿಂದ, ಪ್ರಮಾಣಕ್ಕಿಂತ ಗುಣಮಟ್ಟಕ್ಕೇ ಹೆಚ್ಚು ಒತ್ತು ನೀಡಲು ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಚಿಂತನೆ ನಡೆಸಿದ್ದು, ಪ್ರಸ್ತಾವವನ್ನು ರೈಲ್ವೇ ಮಂಡಳಿಗೆ ಕಳುಹಿಸಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ, ರೈಲಿನಲ್ಲಿನ ಊಟದ ಪ್ರಮಾಣ ಹಾಗೂ ಮೆನುವಿನಲ್ಲೂ ಸಣ್ಣಮಟ್ಟಿಗೆ ಬದಲಾವಣೆ ಆಗಲಿದೆ.
ಕಾರಣವೇನು?
ಆಹಾರದ ಗುಣಮಟ್ಟದ ಬಗ್ಗೆ ಕೇಳಿಬರು ತ್ತಿರುವ ದೂರುಗಳು ಒಂದು ಕಾರಣವಾ ದರೆ, ಕಚ್ಚಾ ವಸ್ತುಗಳ ದರ ಏರಿಕೆಯಾಗಿರುವುದರಿಂದ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವುದು ಸವಾಲಾಗಿ ಪರಿಣಮಿಸಿರುವುದೂ IRCTC ಈ ನಿರ್ಧಾರಕ್ಕೆ ಕಾರಣ.
ಪರಿಸರ ದಿನ
ವಿಶ್ವ ಪರಿಸರ ದಿನವಾದ ಮಂಗಳವಾರದಿಂದ ಕೆಲವು ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳಲ್ಲಿ ಜೈವಿಕ ವಿಘಟನೀಯ ಕಂಟೇನರ್ ಗಳಲ್ಲಿ ಆಹಾರವನ್ನು ಪೂರೈಸಲು IRCTC ಆರಂಭಿಸಿದೆ.
– ಒಟ್ಟಾರೆ ಊಟದ ಪ್ರಮಾಣವನ್ನು 700 ಗ್ರಾಂಗೆ ಇಳಿಸಲು ಚಿಂತನೆ
– ದಾಲ್ ಪ್ರಮಾಣ ಈಗಿರುವ 150 ಗ್ರಾಂ ಬದಲು 100-120 ಗ್ರಾಂ
– ಮಾಂಸಾಹಾರಿ ಊಟಕ್ಕೆ ಚಿಕನ್ ಪೀಸ್ ಬದಲು ಬೋನ್ ಲೆಸ್ ಚಿಕನ್ ಗ್ರೇವಿ
– ಹಸಿ ತರಕಾರಿಯನ್ನೂ ಒದಗಿಸುವ ವ್ಯವಸ್ಥೆ
– ವಿಮಾನದಲ್ಲಿರುವ ಕಾಂಬೋ ಮೀಲ್ಸ್ ಆಫರ್
– ಸೂಪ್ ಮತ್ತು ಬ್ರೆಡ್ ಸ್ಟಿಕ್ ಪೂರೈಕೆ ರದ್ದು
900 ಗ್ರಾಂ : ಸದ್ಯ ನೀಡಲಾಗುತ್ತಿರುವ ಊಟದ ಪ್ರಮಾಣ
700 ಗ್ರಾಂ : ಇನ್ನು ಮುಂದೆ ನೀಡಲು ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ