ಭಾರತದ ಸರಿಯಾದ ನಕ್ಷೆ ಬಳಸುವಂತೆ ವಾಟ್ಸ್ಆ್ಯಪ್ಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವ
Team Udayavani, Dec 31, 2022, 8:40 PM IST
ನವದೆಹಲಿ: ಭಾರತದ ಸರಿಯಾದ ನಕ್ಷೆ ಬಳಸದ ಮೆಟಾ ಒಡೆತನದ ವಾಟ್ಸ್ಆ್ಯಪ್ ಕಂಪನಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಇಲಾಖೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಪ್ಪಾದ ನಕ್ಷೆಯನ್ನು ವಾಟ್ಸ್ಆ್ಯಪ್ ಬಳಸಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ರಾಜೀವ್ ಚಂದ್ರಶೇಖರ್, “ವಾಟ್ಸ್ಆ್ಯಪ್ ಕಂಪನಿಯು ತಪ್ಪಾದ ಭಾರತದ ನಕ್ಷೆ ಬಳಸಿದ್ದು, ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಅಥವಾ ಭಾರತದಲ್ಲಿ ವ್ಯಾಪಾರವನ್ನು ಮುಂದುವರಿಸಲು ಬಯಸುವ ಎಲ್ಲಾ ಕಂಪನಿಗಳು ಸರಿಯಾದ ನಕ್ಷೆ ಬಳಸಬೇಕು,’ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದ ಭಾರತದ ನಕ್ಷೆ ವಿಷಯವಾಗಿ ಜೂಮ್ ಸಿಇಒ ಎರಿಕ್ ಯುವಾನ್ ಅವರಿಗೆ ರಾಜೀವ್ ಚಂದ್ರಶೇಕರ್ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಬಿಜೆಪಿಯಿಂದ ಮಾತ್ರ ದೇಶಕ್ಕೆ ಉಜ್ವಲ ಭವಿಷ್ಯ ನೀಡಲು ಸಾಧ್ಯ: ಸಿಎಂ ಬೊಮ್ಮಾಯಿ