ಧಿಮಾಕಿನ ಅಧಿಕಾರಿಗಳಿಂದಾಗಿ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು : ಶಾಸಕ ದಡೇಸೂಗೂರು
Team Udayavani, Dec 31, 2022, 8:27 PM IST
ಗಂಗಾವತಿ: ಚುನಾಯಿತರ ಮಾತಿಗೆ ಕಿಮ್ಮತ್ತು ನೀಡದೇ ದಿಮಾಕು ತೋರುವ ಕೆಲ ಅಧಿಕಾರಿಗಳ ಭ್ರಷ್ಠಚಾರದಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ.ಈ ಬಗ್ಗೆ ಗೃಹ ಸಚಿವರಿಗೂ ದೂರು ಬಂದಿವೆ.ಗಂಗಾವತಿ ಸೇರಿ ಜಿಲ್ಲೆಯ ಕೆಲ ಪೊಲೀಸ್ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳಿಗೆ ಕಿಮ್ಮತ್ತು ನೀಡದಷ್ಟು ದಿಮಾಕು ನಡೆಸುತ್ತಿರುವುದು ಸರಿಯಾದ ಬೆಳವಣ ಗೆಯಲ್ಲ ಎಂದು ಕನಕಗಿರಿ ಶಾಸಕ ದಡೇಸೂಗೂರು ಬಸವರಾಜ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೂತನ ಪೊಲೀಸ್ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕೊಪ್ಪಳ ಜಿಲ್ಲೆಯ ಪೊಲೀಸರು ಜನಸಾಮಾನ್ಯರಿಗೆ ಸ್ಪಂದಿಸುತ್ತಿಲ್ಲ. ಚುನಾಯಿತರ ಮಾತು ಕೇಳುತ್ತಿಲ್ಲ ಇದರಿಂದ ಕೆಲ ಅಧಿಕಾರಿಗಳ ದರ್ಪ ಹೆಚ್ಚಾಗಿದೆ. ಸಂವಿಧಾನದ ಉಲ್ಲಂಘನೆ ಮಾಡಿ ಧಿಮಾಕು ದರ್ಪ ತೋರುವ ಪೊಲೀಸ್ ಅಧಿಕಾರಿಗಳು 16 ವರ್ಷ ದ ಬಾಲಕರ ಮೇಲೆ ದೌರ್ಜನ್ಯವೆಸಗಿ ಕೇಸ್ ದಾಖಲಿಸಲಾಗುತ್ತಿದ್ದು ಪಕ್ಷಗಳ ಹೆಸರಿನಲ್ಲಿ ಮರಳು,ಮರಂ ಸಾಗಾಣಿಕೆ ಪ್ರಕರಣಗಳಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಬಡವರ ವಿರುದ್ಧ ಕೇಸ್ ಹಾಕಲಾಗುತ್ತಿದ್ದು ಅನ್ಯಾಯವಾಗಿದೆ. ಹಣ ಮಾಡುವ ಕೆಲ ಅಧಿಕಾರಿಗಳ ವಿರುದ್ಧ ಜನರ ಜತೆ ಸೇರಿ ನಾನು ಹೋರಾಟ ಮಾಡುತ್ತೇನೆ ಎಂದರು.
ಭ್ರಷ್ಟಾಚಾರ ಮಾಡುವ ಮತ್ತು ಬಡವರ ವಿರುದ್ದ ಸುಳ್ಳು ಕೇಸ್ ಹಾಕುವ ಕೆಲ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ದ ಐಜಿಪಿ ಅವರು ಸೂಕ್ತ ಕ್ರಮ ಜರುಗಿಸ ಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ