ರಾಜ್ಯಸಭೆ ಚುನಾವಣೆ: ವಿರೋಧ ಪಕ್ಷಕ್ಕೆ ಅಡ್ಡ ಮತದಾನ ಭೀತಿ
Team Udayavani, Aug 8, 2017, 11:19 AM IST
ಹೊಸದಿಲ್ಲಿ /ಅಹ್ಮದಾಬಾದ್ : 2017ರ ರಾಜ್ಯಸಭಾ ಚುನಾವಣೆಗೆ ಇಂದು ಮಂಗಳವಾರ ಬೆಳಗ್ಗೆ ಮತದಾನ ಆರಂಭವಾಗಿದೆ. ವಿರೋಧಪಕ್ಷಕ್ಕೆ ಶಾಸಕರ ಅಡ್ಡಮತದಾನವೇ ಮುಳುವಾಗಲಿದೆ ಎಂಬ ಶಂಕೆ ಬಲವಾಗಿದೆ.
ಒಟ್ಟು ಹತ್ತು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳು ಗುಜರಾತ್, ಆರು ಸ್ಥಾನಗಳು ಪಶ್ಚಿಮ ಬಂಗಾಲ, ಮತ್ತು ಒಂದು ಸ್ಥಾನ ಮಧ್ಯಪ್ರದೇಶಕ್ಕೆ ಸೇರಿದ್ದಾಗಿದೆ.
ಈ ಪೈಕಿ ಗುಜರಾತ್ನಲ್ಲಿ ಸಾಗುತ್ತಿರುವ ಚುನಾವಣೆಯು ಅತ್ಯಂತ ಕುತೂಹಲಕಾರಿ ಎನಿಸಿದೆ. ಕಾರಣ ಇಲ್ಲಿನ ಆರು ಕಾಂಗ್ರೆಸ್ ಶಾಸಕರು ನಿಷ್ಠಾಂತರ ಮಾಡಿದ್ದಾರೆ. ಬಿಜೆಪಿ ಆಮಿಷದಿಂದ ದೂರವಿಡಲು 44 ಕೈ ಶಾಸಕರನ್ನು ದೂರದ ಬೆಂಗಳೂರಿನ ರಿಸಾರ್ಟ್ನಲ್ಲಿ ಇರಿಸಲಾಗಿ ಎರಡು ದಿನಗಳ ಹಿಂದಷ್ಟೇ ಅವರನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ.
ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ನಿಕಟವರ್ತಿ, ಅಹ್ಮದ್ ಪಟೇಲ್ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ಗುಜರಾತ್ ರಾಜ್ಯಸಭಾ ಚುನಾವಣಾ ಕಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸ್ಮತಿ ಇರಾನಿ ಮತ್ತು ಈಚೆಗಷ್ಟೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದು ರಾಜ್ಯಸಭಾ ಚುನಾವಣಾವಕಾಶ ಪಡೆದುಕೊಂಡಿರುವ ಬಲವಂತ ಸಿಂಗ್ ರಾಜಪೂತ್ ಅವರು ಕಣದಲ್ಲಿದ್ದಾರೆ.
ಗುಜರಾತ್ ನಲ್ಲಿ ಮತದಾನ ಆರಂಭವಾದ ಸ್ವಲ್ಪಹೊತ್ತಿನಲ್ಲೇ ಇಬ್ಬರು ಕೈ ಶಾಸಕರು ಬಿಜೆಪಿಗೆ ಮತ ಹಾಕಿರುವುದನ್ನು ಪಕ್ಷದ ಸದಸ್ಯ ಅರ್ಜುನ್ ಮೋಧ್ವಾಡಿಯಾ ಒಪ್ಪಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!