2023ಕ್ಕೆ ಮಂದಿರ ಲೋಕಾರ್ಪಣೆ


Team Udayavani, Aug 5, 2021, 7:00 AM IST

2023ಕ್ಕೆ ಮಂದಿರ ಲೋಕಾರ್ಪಣೆ

ವಿಶ್ವದೆಲ್ಲೆಡೆ ಇರುವ ಸಮಸ್ತ ಹಿಂದೂಗಳು ತದೇಕಚಿತ್ತರಾಗಿ ಗಮನಿಸುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದ 2023ರ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.  ಅದೇ ವರ್ಷ ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸಮಸ್ತ ಭಕ್ತರಿಗೆ ಕೇಂದ್ರ ಸರಕಾರವೇ ಈ ಸಿಹಿ ಸುದ್ದಿ ನೀಡಿದೆ. ಇದೇ ಆ. 5ಕ್ಕೆ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಈವರೆಗೆ ಮಂದಿರ ನಿರ್ಮಾಣ ಜಾಗದಲ್ಲಿರುವ ಆಗಿರುವ ಕಾಮಗಾರಿಗಳ ಪಕ್ಷಿನೋಟ ಇಲ್ಲಿದೆ. ಅಕ್ಟೋಬರ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಅಗತ್ಯವಾಗಿರುವ ತಳಹ‌ದಿ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ.

ಹೇಗಿರಲಿದೆ ದೇಗುಲ?  :

ದಶಕಗಳ ಹಿಂದೆ ಪ್ರಸ್ತಾವನೆಗೊಂಡಿದ್ದ ರಾಮಮಂದಿರ ವಿನ್ಯಾಸಕ್ಕಿಂತ ಈಗ ಕಟ್ಟುತ್ತಿರುವ ದೇಗುಲ ದುಪ್ಪಟ್ಟು ದೊಡ್ಡದಿರಲಿದೆ. 161 ಅಡಿ ಎತ್ತರವಿರಲಿರುವ ಈ ದೇವಸ್ಥಾನವು ಮೂರು ಅಂತಸ್ತು ಹಾಗೂ ಐದು ಗುಮ್ಮಟಗಳನ್ನು ಒಳಗೊಂಡಿರಲಿದೆ. ಇಡೀ ದೇಗುಲವನ್ನು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.

ನೆಲ ಅಂತಸ್ತಿನಲ್ಲಿ “ರಾಮ್‌ ದರ್ಬಾರ್‌’ :

2023ರ ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿ ರುವ ಶ್ರೀರಾಮ ಮಂದಿರದ ನೆಲ ಅಂತಸ್ತಿನಲ್ಲಿ ಶ್ರೀರಾಮ ದೇಗುಲದ ಗರ್ಭಗುಡಿ ಹಾಗೂ ಐದು ಮಂಟಪಗಳಿರುತ್ತವೆ. ಈಗ ತಾತ್ಕಾಲಿಕ ದೇಗುಲದಲ್ಲಿರುವ ರಾಮಲಲ್ಲಾ ಮೂರ್ತಿಯನ್ನು 2023ರಲ್ಲಿ ಇದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

2023ರಲ್ಲಿ  ನೆಲ ಅಂತಸ್ತು ಉದ್ಘಾಟನೆ :

  • 2025 ಪೂರ್ತಿ ದೇಗುಲ ಲೋಕಾರ್ಪಣೆಗೊಳ್ಳುವ ವರ್ಷ
  • 101ಎಕರೆ ದೇಗುಲದ ಪರಿಷ್ಕೃತ ವ್ಯಾಪ್ತಿ
  • 67ಎಕರೆ ಈ ಹಿಂದಿನ ಯೋಜನೆಯಲ್ಲಿದ್ದ ದೇಗುಲದ ವ್ಯಾಪ್ತಿ
  • 84,600ಚ. ಅಡಿ ದೇಗುಲದ ವಿಸ್ತೀರ್ಣ
  • 1000 ಕೋಟಿ ರೂ. ಪೂರ್ಣ ದೇಗುಲ ನಿರ್ಮಾಣಕ್ಕೆ ಆಗುವ ಅಂದಾಜು ಖರ್ಚು
  • 3000 ಕೋಟಿ ರೂ. ಶ್ರೀರಾಮಮಂದಿರ ಪುಣ್ಯಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆ
  • 10 ಲಕ್ಷ ರಾಮನವಮಿಗೆ ರಾಮಮಂದಿರ ದಲ್ಲಿ ಸೇರಬಹುದಾದ ಭಕ್ತರ ಅಂದಾಜು.

ವರ್ಷದಿಂದ ಆಗಿರುವ ಕಾಮಗಾರಿಗಳೇನು?  :

  • ದೇಗುಲ ಕಟ್ಟುವ ಜಾಗದಲ್ಲಿ ನೆಲದ ಮೇಲ್ಮಟ್ಟದಿಂದ ಕಳಗೆ 12 ಮೀಟರ್‌ನಷ್ಟಿದ್ದ ಅವಶೇಷಗಳ ತೆರವಿಗಾಗಿ ದೇಗುಲ ನಿರ್ಮಾಣ ಪ್ರಾಂತ್ಯದಲ್ಲಿ ಸರ್ವೇ.
  • ಅಂತಸ್ತಿಗಾಗುವಷ್ಟಿದ್ದ ಅವಶೇಷಗಳ ತೆರವು.
  • ಸಡಿಲ ಮಣ್ಣಿರುವ ಭೂಮಿಯ ಅಡಿಯಲ್ಲಿ ದೈತ್ಯ ಕಟ್ಟಡದ ಭಾರವನ್ನು ತಡೆದುಕೊಳ್ಳುವಂಥ “ವೈಬ್ರೋ ಪೈಲ್ಸ್‌’ ಬಳಕೆ.
  • ಟ್ರಸ್ಟ್‌ನ ಸೂಚನೆಯಂತೆ ದೇಗುಲ ನಿರ್ಮಾಣದ ಜಾಗದಲ್ಲಿ ಉತVನನ ಆರಂಭ. 70 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಮಣ್ಣು ಉತ್ಖನನ.
  • ದೇಗುಲ ನಿರ್ಮಾಣಕ್ಕಾಗಿ ತೋಡಿದ ಜಾಗದಲ್ಲಿ 40 ಪದರಗಳ ಕಾಂಕ್ರೀಟ್‌ ಬೆಡ್‌ ನಿರ್ಮಾಣ. ಪ್ರತೀ ಪದರ 8 ಇಂಚು ದಪ್ಪ.
  • ಈವರೆಗೆ ಒಟ್ಟಾರೆ ಫಿಲ್ಲಿಂಗ್‌ ಕಾಮಗಾರಿಯಲ್ಲಿ ಶೇ. 50ರಷ್ಟು ಪೂರ್ಣ (70 ಲಕ್ಷ ಕ್ಯೂಬಿಕ್‌ ಮೀಟರ್‌) ಫಿಲ್ಲಿಂಗ್‌ ಪೂರ್ಣ. ಈ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿ. ಸೆ. 15ಕ್ಕೆ ಮುಗಿಯುವ ಸಾಧ್ಯತೆ. ಫಿಲ್ಲಿಂಗ್‌ಗಾಗಿ ರೋಲರ್‌ ಕಾಂಪ್ಯಾಕ್ಟೆಡ್‌ ಕಾಂಕ್ರೀಟ್‌ ಬಳಕೆ.
  • ಫಿಲ್ಲಿಂಗ್‌ ಮುಗಿದ ಮೇಲೆ ಇಡೀ ದೇಗುಲ ನಿರ್ಮಾಣ ಜಾಗದಲ್ಲಿ 7 ಅಡಿ ದಪ್ಪವಿರುವ ಮತ್ತೂಂದು ಕಾಂಕ್ರೀಟ್‌ ಪದರ ನಿರ್ಮಾಣ. ಅದರ ಮೇಲೆ ಕಬ್ಬಿಣ-ಸಿಮೆಂಟ್‌ ಸೇರಿಸಿ ಮಾಡುವ ಬೀಮ್‌ಗಳ ನಿರ್ಮಾಣ. ಪ್ರತಿಯೊಂದು ಬೀಮ್‌, 16 ಅಡಿಯಷ್ಟು ದಪ್ಪ.
  • ದೇಗುಲ ನಿರ್ಮಾಣದ ಜಾಗದಲ್ಲಿ 66 ಎಕರೆಯಲ್ಲಿ ನಾನಾ ಸೌಕರ್ಯ ನಿರ್ಮಿಸುವ ಕಾಮಗಾರಿಗೂ ಚಾಲನೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.