ಜು.3ರಿಂದ ರಮಾನಂದ ಸಾಗರ ಅವರ ರಾಮಾಯಣ ಮರುಪ್ರಸಾರ
Team Udayavani, Jun 29, 2023, 8:00 AM IST
ಮುಂಬೈ: ರಾಮಾಯಣ ಆಧಾರಿತ ಆದಿಪುರುಷ ಚಿತ್ರದ ಬಗ್ಗೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿರುವ ನಡುವೆಯೇ, ರಾಮಾಯಣದ ಪಾತ್ರಗಳನ್ನು ತೆರೆ ಮೇಲೆ ಕಟ್ಟಿಕೊಟ್ಟು ಜನರ ಮನಸೂರೆಗೊಂಡಿದ್ದ ರಮಾನಂದ ಸಾಗರ ಅವರ ಪ್ರಖ್ಯಾತ ಸರಣಿ “ರಾಮಾಯಣ’ ಟಿವಿಯಲ್ಲಿ ಮರುಪ್ರಸಾರಗೊಳ್ಳಲು ಸಜ್ಜಾಗಿದೆ.
1987ರಲ್ಲಿ ಟಿವಿ ಸರಣಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ರಾಮಾಯಣ, ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ತನ್ನದೇ ವೀಕ್ಷಕರನ್ನು ಹೊಂದಿದೆ.
ಅಲ್ಲದೇ, ತೀವ್ರ ಪ್ರಮಾಣದ ಖ್ಯಾತಿಯನ್ನೂ ಗಳಿಸಿತ್ತು. ಈಗ ರಾಮಾಯಣದ ವಿಚಾರದಲ್ಲಿ ಆದಿಪುರುಷ ಸಿನಿಮಾದ ಎಡವಟ್ಟು ನೋಡಿದ್ದ ಪ್ರೇಕ್ಷಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿತ್ತು. ಈ ಬೆನ್ನಲ್ಲೇ, ಶೀಮಾರೋ ಚಾನೆಲ್ ಮತ್ತೆ ರಮಾನಂದ ಸಾಗರ ಅವರ ರಾಮಾಯಣ ಪ್ರದರ್ಶಿಸಲು ನಿರ್ಧರಿಸಿದ್ದು, ಜು.3ರಿಂದ ಸಂಜೆ 7.30ಕ್ಕೆ ರಾಮಾಯಣ ಸರಣಿ ಪ್ರಸಾರವಾಗಲಿದೆ ಎಂದಿದೆ. ಇದರಿಂದ ಅನೇಕ ಅಭಿಮಾನಿಗಳು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ.