ನೊಡೋಣ, ಪರಿಶೀಲಿಸೋಣ…
Team Udayavani, Mar 3, 2017, 11:00 AM IST
ಬ್ಯಾಂಕ್ಗಳ ಶುಲ್ಕ ಕುರಿತು ಸಚಿವ ರವಿಶಂಕರ್ ಪ್ರಸಾದ್ ಅಭಿಮತ
ಹೊಸದಿಲ್ಲಿ: ತಿಂಗಳಲ್ಲಿ ನೀಡಲಾಗುವ ನಾಲ್ಕು ಉಚಿತ ವಹಿವಾಟಿನ ನಂತರ ಹಾಗೂ ವಿತ್ಡ್ರಾ ಮತ್ತು ಡಿಪಾಸಿಟ್ಗಳ ಮೇಲೆ ಶುಲ್ಕ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಹೆಚ್ಚಿನ ಮಾಹಿತಿ ಸಿಕ್ಕ ಬಳಿಕ ಪರಿಶೀಲಿಸುವುದಾಗಿ ಹೇಳಿದ್ದಾರೆ. ಡಿಜಿಟಲ್ ಪಾವತಿ ಬಳಕೆದಾರರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. 1.72 ಕೋಟಿಗೂ ಜಾಸ್ತಿ ಜನರು ಸರಕಾರದ ಭೀಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾಂಕ್ಗಳು ಏನು ಹೇಳಿದ್ದವು?
ವಹಿವಾಟು ಮೇಲಿನ ಶುಲ್ಕಕ್ಕೆ ಸಂಬಂಧಿಸಿ ಪ್ರತಿಷ್ಠಿತ ಬ್ಯಾಂಕ್ಗಳಾದ ಎಚ್ಡಿಎಫ್ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ಗಳು ಹೊಸ ನಿಯಮಗಳನ್ನು ಪ್ರಕಟಿಸಿ, ಮಾರ್ಚ್ 1ರಿಂದಲೇ ಇದು ಜಾರಿಗೆ ಬರುವುದಾಗಿ ಪ್ರಕಟಿಸಿತ್ತು.
– ತಿಂಗಳಿನ ನಾಲ್ಕು ಉಚಿತ ವಹಿವಾಟಿನ ಬಳಿಕ ಐದನೇ ವಹಿವಾಟು ಅಂದರೆ, ಪ್ರತಿ ವಿತ್ಡ್ರಾ ಮತ್ತು ಡಿಪಾಸಿಟ್ಗೆ (ಪ್ರತಿ ಸಾವಿರ ವಹಿವಾಟಿಗೆ 5.ರೂ.ನಂತೆ) ಕನಿಷ್ಠ 150 ರೂ ಶುಲ್ಕ ವಿಧಿಸಲಾಗುತ್ತದೆ.
– ತಿಂಗಳಲ್ಲಿ ಬ್ಯಾಂಕ್ಗಳು ನೀಡಿರುವ ಶುಲ್ಕ ರಹಿತ ವಹಿವಾಟು ಬಳಕೆಯಾದ ಬಳಿಕ ಪ್ರತಿಯೊಂದು ವಹಿವಾಟು ಶುಲ್ಕವನ್ನು ಒಳಗೊಂಡಿರುತ್ತದೆ.
– ಎಟಿಎಂ ನಿಯಮ ಬದಲಾವಣೆ ಇಲ್ಲ! ಎಟಿಎಂ ಬಳಕೆಗೆ ಸಂಬಂಧಿ ಗೊಂದಲ ಬೇಕಾಗಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
– ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಐದು ಬಾರಿ ಹಣ ಪಡೆದರೆ (ವಿತ್ಡ್ರಾ) ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
– ಖಾತೆ ಇಲ್ಲದ ಬ್ಯಾಂಕ್ಗಳಿಗೆ ಸೇರಿದ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಹಣ ಪಡೆದರೆ ಅವು ಉಚಿತ. ಆದರೆ 6ನೇ ವಹಿವಾಟಿನಿಂದ 20 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ.
ಎಚ್ಡಿಎಫ್ಸಿಯಿಂದ ತೆರಿಗೆ
– ತಿಂಗಳಲ್ಲಿನ ನಾಲ್ಕು ಉಚಿತ ವಹಿವಾಟಿನ ನಂತರದ ವಹಿವಾಟಿಗೆ ಪಡೆಯಲಾಗುವ 150 ರೂ. ಶುಲ್ಕದ ಜತೆ ತೆರಿಗೆ ಮತ್ತು ಸೆಸ್ ಕೂಡ ಪಡೆಯಲಾಗುತ್ತದೆ.
– ಖಾತೆ ಹೊಂದಿರುವ ಬ್ಯಾಂಕ್ನಲ್ಲಿ ವಿತ್ಡ್ರಾ ಮತ್ತು ಡಿಪಾಸಿಟ್ ಮಿತಿ 2 ಲಕ್ಷ ರೂ. ಆಗಿದ್ದು, ಇದಕ್ಕಿಂತ ಜಾಸ್ತಿ ವಹಿವಾಟು ಮಾಡಿದಲ್ಲಿ ಅವೆಲ್ಲದಕ್ಕೂ ಶುಲ್ಕ ನೀಡಬೇಕಾಗುತ್ತದೆ.
ಪರಿಣಾಮ ಏನೇನು, ಹೇಗೆ?
– ಉಳಿತಾಯ ಮತ್ತು ವೇತನ (ಸ್ಯಾಲರಿ) ಖಾತೆದಾರರಿಗೆ ವಹಿವಾಟು ಶುಲ್ಕ ಅನ್ವಯವಾಗಲಿದೆ.
– ಪ್ರೈಮ್, ಕ್ಲಾಸಿಕ್, ಪ್ರಿಫರ್ಡ್, ಇಂಪೇರಿಯ ಅಥವಾ ಇತರೆ ಗ್ರಾಹಕರಿಗೂ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ