ಭಾರತದಲ್ಲಿ ಹಣದುಬ್ಬರ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ: ಆರ್ಬಿಐ
Team Udayavani, Jun 24, 2022, 9:15 PM IST
ನವದೆಹಲಿ: ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಹಣದುಬ್ಬರ ಸಮಸ್ಯೆ ಎದುರಾಗಿದೆ. ಭಾರತದಲ್ಲಿ ಅದನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಯತ್ನಿಸುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಣದ ಹರಿವನ್ನು ಹೆಚ್ಚು ಮಾಡಲು ಆರ್ಬಿಐ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ:ಅತ್ಯಾಧುನಿಕ ಎಲ್ಹೆಚ್ಬಿ ಕೋಚ್ಗಳೊಂದಿಗೆ ಹಂಪಿ ಎಕ್ಸ್ ಪ್ರೆಸ್ ಓಡಾಟ
ಹಣದ ಹರಿವು ಕೊಂಚ ಸುಧಾರಿಸಿದ ನಂತರವಷ್ಟೇ ನಾವು ಬ್ಯಾಂಕುಗಳ ರೆಪೋ ದರವನ್ನು ಪರಿಷ್ಕರಿಸಿದ್ದೆವು ಎಂದು ಅವರು ಹೇಳಿದ್ದಾರೆ.