ತಮಿಳುನಾಡಿನಲ್ಲಿ ನಿತ್ಯ 4 ಸಾವಿರ “ಕೆಂಗಣ್ಣು’ ಪ್ರಕರಣ ದೃಢ
Team Udayavani, Nov 23, 2022, 7:10 AM IST
ಚೆನ್ನೈ: ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಈಚೆಗೆ ಪ್ರತಿ ದಿನ 4 ಸಾವಿರ ಕೆಂಗಣ್ಣು (ಮದ್ರಾಸ್ ಐ) ಪ್ರಕರಣಗಳು ದೃಢಪಡುತ್ತಿವೆ.
ಆ ರಾಜ್ಯದಲ್ಲಿ ಮುಂಗಾರು ಪ್ರಕೋಪ ಶುರುವಾಗಿರುವಂತೆಯೇ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ತಮಿಳುನಾಡು ರಾಜಧಾನಿ ಚೆನ್ನೈ ಒಂದರಲ್ಲಿಯೇ ಪ್ರತಿ ದಿನ ಕನಿಷ್ಠ 80ರಿಂದ 100 ಮಂದಿ ಕೆಂಗಣ್ಣು ಸಮಸ್ಯೆಗೆ ಒಳಗಾಗಿ, ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಇಲಾಖೆ ಕಣ್ಣಿನ ಸುರಕ್ಷತೆಯ ಬಗ್ಗೆ ಸುತ್ತೋಲೆ ಹೊರಡಿಸಿದೆ. ಜತೆಗೆ ಸಮಸ್ಯೆಗೆ ತುತ್ತಾದವರು ಪ್ರತ್ಯೇಕವಾಗಿ ಇರಬೇಕು ಎಂದು ಮನವಿ ಮಾಡಿದೆ.