ಸುಳ್ ಸುದ್ದಿ : ಬಿಹಾರದಲ್ಲಿ 1 ಕೆಜಿ ತರಕಾರಿಗೆ 1 ಲಕ್ಷ ಇಲ್ವೇ ಇಲ್ಲ!
Team Udayavani, Apr 3, 2021, 6:16 PM IST
ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ನಂಬುವುದೇ ಕಷ್ಟ. ಬೆಳಗ್ಗೆ ತುಂಬಾ ಸದ್ದು ಮಾಡಿದ ವಿಡಿಯೋ ಅಥವಾ ಸುದ್ದಿ, ಸಂಜೆಯೊಳಗಾಗಲೇ ಆ ಸುದ್ದಿ ಸುಳ್ಳು ಎಂದು ವೈರಲ್ ಆಗುತ್ತದೆ. ಇದಕ್ಕೆ ಸಾಕ್ಷಿಯಂತಿದೆ ಈ ಸುದ್ದಿ. ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಷಯ ಹರಿದಾಡುತ್ತಿದೆ.
ಅದೇನೆಂದರೆ ಬಿಹಾರದ ಒಬ್ಬ ರೈತ ‘ಹಾಪ್ ಶೂಟ್’ ಎಂಬ ತರಕಾರಿಯನ್ನು ಬೆಳೆದಿದ್ದು, ಇದರ ಬೆಲೆ ಕೆಜಿಗೆ ಬರೋಬ್ಬರಿ ಒಂದು ಲಕ್ಷ ಎಂದು ಸುಪ್ರಿಯಾ ಸಾಹು ಐಎಎಸ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಆ ನಂತರ ಎಲ್ಲಾ ಕಡೆ ಈ ಸುದ್ದಿ ಭಾರೀ ಸದ್ದು ಮಾಡಿದ್ದು, ಇದೀಗ ಈ ಸುದ್ದಿನೇ ಸುಳ್ಳು ಎನ್ನಲಾಗುತ್ತಿದೆ.
One kilogram of this vegetable costs about Rs 1 lakh ! World’s costliest vegetable,’hop-shoots’ is being cultivated by Amresh Singh an enterprising farmer from Bihar, the first one in India. Can be a game changer for Indian farmers ?https://t.co/7pKEYLn2Wa @PMOIndia #hopshoots pic.twitter.com/4FCvVCdG1m
— Supriya Sahu IAS (@supriyasahuias) March 31, 2021
ಈ ಹಾಪ್ ಶೂಟ್ ಬೆಳೆಯನ್ನು ಬೆನ್ನು ಹತ್ತಿ ಮಾಹಿತಿ ಕಲೆ ಹಾಕಬೇಕೆಂದು ಹಿಂದಿಯ ‘ದೈನಿಕ ಜಾಗರಣ್’ ಪತ್ರಿಕೆಯ ತಂಡ ಬಿಹಾರದ ಅಮರೇಶ್ ಸಿಂಗ್ ಜಮೀನಿಗೆ ಹೋಗಿದ್ದಾರೆ. ಆದ್ರೆ ಅಲ್ಲಿ ಈ ರೀತಿಯ ಯಾವ ಬೇಳೆಯನ್ನೂ ಬೆಳೆದಿಲ್ಲ. ನಂತರ ಅಮರೇಶ್ ಅವರನ್ನು ಸಂಪರ್ಕ ಮಾಡಿದಾಗ ನಳಂದ ಜಿಲ್ಲೆಯಲ್ಲಿ ಬೆಳೆಯಲಾಗಿದೆ ಎಂದಿದ್ದಾರೆ. ಅಲ್ಲಿಗೂ ಹುಡುಕಿಕೊಂಡು ಹೋದಾಗ, ಔರಂಗಬಾದ್ ನಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ ಎಂದು ಅಮರೇಶ್ ಹೇಳಿದ್ದಾರೆ.
ನಂತರ ಔರಂಗಬಾದ್ ಜಿಲ್ಲಾಧಿಕಾರಿಯನ್ನು ವಿಚಾರಿಸಿದಾದ ಹಾಪ್ ಶೂಟ್ ಹೆಸರಿನ ಯಾವುದೇ ಬೆಳೆಯನ್ನು ಈ ಜಿಲ್ಲೆಯಲ್ಲಿ ಬೆಳೆಯಲಾಗಿಲ್ಲ ಎಂದು ಉತ್ತರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನಲಾಗಿದೆ.
ಫೋಟೋದಲ್ಲಿ ತರಕಾರಿ ಜೊತೆ ಇರುವ ಅಮರೇಶ್ ಅವರು ಕೇವಲ ಕಪ್ಪು ಭತ್ತ ಮತ್ತು ಗೋಧಿಯನ್ನು ಬೇಳೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ