ಜೆರುಸಲೇಂ: ಶ್ರೀನಗರ ಬಂದ್; ಪೊಲೀಸ್ ಬಿಗಿ ಬಂದೋಬಸ್ತ್
Team Udayavani, Dec 8, 2017, 12:32 PM IST
ಶ್ರೀನಗರ : ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಪ್ರತಿಭಟಿಸಲು ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳು ಇಂದು ಶುಕ್ರವಾರ “ಶಾಂತಿಯುತ’ ಬಂದ್ಗೆ ಕರೆ ನೀಡಿದ್ದು ಅಧಿಕಾರಿಗಳು ಶ್ರೀನಗರದ ಕೆಲವು ಭಾಗಗಳಲ್ಲಿ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿ ಹದಗಡೆದಂತೆ ನಿರ್ಬಂಧಗಳನ್ನು ವಿಧಿಸಿದ್ದಾರೆ.
ಶ್ರೀನಗರದ ಮೂರು ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಮಾತ್ರವೇ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಗರದ ಸಫಾಕದಾಲ್, ನೌಹಟ್ಟಾ ಮತ್ತು ಎಂ ಆರ್ ಗಂಜ್ ಪ್ರದೇಶಗಳಲ್ಲಿ ಸೆ.144 ಹೇರಲಾಗಿದೆ ಎಂದವರು ಹೇಳಿದ್ದಾರೆ.
ಪ್ರತ್ಯೇಕತಾವಾದಿಗಳ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ತೋರಿಬಂದಿದ್ದು ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಗಳಿಲ್ಲ.