ಸಾಧ್ವಿ ಪ್ರಜ್ಞಾಗೆ ಹೊಸ ಸಂಕಷ್ಟ
Team Udayavani, May 22, 2019, 6:03 AM IST
ಭೋಪಾಲ್: ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ಗೆ ಹೊಸ ಸಂಕಷ್ಟ ಎದುರಾಗಿದೆ. 12 ವರ್ಷಗಳ ಹಿಂದಿನ ಆರೆಸ್ಸೆಸ್ನ ಮಾಜಿ ಪ್ರಚಾರ ಸುನಿಲ್ ಜೋಷಿ ಹತ್ಯೆಯ ಮರುತನಿಖೆಗೆ ಆದೇಶಿಸಲು ಮಧ್ಯಪ್ರದೇಶ ಸರಕಾರ ಚಿಂತನೆ ನಡೆಸಿದೆ.
ಭೋಪಾಲ್ ಕ್ಷೇತ್ರದಲ್ಲಿ ಸಾಧ್ವಿ ಠಾಕೂರ್ ಗೆಲುವಿನ ಬಗ್ಗೆ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 12 ವರ್ಷಗಳ ಹಿಂದಿನ ಜೋಷಿ ಹತ್ಯೆ ಪ್ರಕರಣದ ಮರು ತನಿಖೆಗೆ ಆದೇಶಿಸುವ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಸರಕಾರ ಮುಂದಾಗಿದೆ. ಇದೊಂದು ಪ್ರತೀಕಾರದ ರಾಜಕೀಯ ಎಂದು ಬಿಜೆಪಿ ಆರೋಪಿಸಿದೆ. ಜೋಷಿ ಕೊಲೆ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಯನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಖುಲಾಸೆ ಗೊಳಿಸಿತ್ತು. 2007ರ ಡಿ.29ರಂದು ಸುನಿಲ್ ಜೋಷಿಯವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.