ಕರ್ನಾಟಕದಲ್ಲಿ ಸಾಮೂಹಿಕ ಶ್ವಾನ ಸಂಹಾರ: ಸುಪ್ರೀಂ ಕೋರ್ಟ್ ವಿಚಾರಣೆ
Team Udayavani, Nov 17, 2018, 11:54 AM IST
ಹೊಸದಿಲ್ಲಿ : ಸಾಮೂಹಿಕ ಶ್ವಾನ ಸಂಹಾರದ ಆರೋಪದ ಮೇಲೆ ಕರ್ನಾಟಕದ ಮುನಿಸಿಪಲ್ ಕೌನ್ಸಿಲ್ ಒಂದರ ಮುಖ್ಯ ಅಧಿಕಾರಿ ಮತ್ತು ಓರ್ವ ಖಾಸಗಿ ಗುತ್ತಿಗೆದಾರನ ವಿರುದ್ಧ ಕೋರ್ಟ್ ನಿಂದನೆಯನ್ನು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಕೊಂಡಿತು.
ಜಸ್ಟಿಸ್ ಎನ್ವಿ ರಮಣ ಮತ್ತು ಎಂ ಎಂ ಶಾಂತನಗೌಡರ್ ಅವರನ್ನು ಒಳಗೊಂಡ ಪೀಠವು ಸಕಲೇಶಪುರದ ಚೀಫ್ ಆಫೀಸರ್ ವಿಲ್ಸನ್ ವಿಟಿ ಮತ್ತು ಖಾಸಗಿ ಗುತ್ತಿಗೆದಾರ ವಿ ಜಾರ್ಜ್ ರಾಬರ್ಟ್ ಅವರಿಗೆ ನೊಟೀಸ್ ಜಾರಿ ಮಾಡಿ ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಆದೇಶಿಸಿತು.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ಉತ್ತರದಾಯಿಗಳ ವಿರುದ್ಧ ಕೋರ್ಟ್ ನಿಂದನೆಯ ಕ್ರಮ ಜರುಗಿಸುವಂತೆ ಅರ್ಜಿದಾರ, ಪ್ರಾಣಿ ಹಕ್ಕು ಕಾರ್ಯಕರ್ತ ನವೀನ್ ಕಾಮತ್ ಅವರನ್ನು ಪ್ರತಿನಿಧಿಸಿದ ವಕೀಲ ಸಿದ್ಧಾರ್ಥ ಗರ್ಗ್ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!