ರೊಹಿಂಗ್ಯಾಗಳ ಗಡೀಪಾರು ನಿರ್ಧಾರದಲ್ಲಿ ಹಸ್ತಕ್ಷೇಪ ಇಲ್ಲ : ಸುಪ್ರೀಂ
Team Udayavani, Oct 4, 2018, 11:45 AM IST
ಹೊಸದಿಲ್ಲಿ : ”ಭಾರತಕ್ಕೆ ಅಕ್ರಮವಾಗಿ ವಲಸೆ ಬಂದು ನೆಲೆಸಿರುವ ರೊಹಿಂಗ್ಯಾಗಳನ್ನು ಮ್ಯಾನ್ಮಾರ್ ತನ್ನ ಪ್ರಜೆಗಳೆಂದು ಹೇಳಿದೆ. ಹಾಗಿರುವಾಗ ಏಳು ರೊಹಿಂಗ್ಯಾಗಳನ್ನು ಮ್ಯಾನ್ಮಾರ್ಗೆ ಗಡೀಪಾರು ಮಾಡುವ ಕೇಂದ್ರ ಸರಕಾರದ ನಿರ್ಧಾರದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಇಂದು ಗುರುವಾರ ಹೇಳಿದೆ.
‘ಕೇಂದ್ರ ಸರಕಾರ ಗಡೀಪಾರು ಮಾಡಲು ನಿರ್ಧರಿಸಿರುವ ಏಳು ಮಂದಿ ರೊಹಿಂಗ್ಯಾಗಳು ಅಕ್ರಮವಾಗಿ ವಲಸೆ ಬಂದು ಭಾರತದಲ್ಲಿ ನೆಲೆಸಿದವರಾಗಿದ್ದು ಅವರನ್ನು ಅವರ ದೇಶಕ್ಕೆ ಗಡೀಪಾರು ಮಾಡುವ ಕೇಂದ್ರ ಸರಕಾರದ ನಿರ್ಧಾರದಲ್ಲಿ ನಾವು ಹಸ್ತಕ್ಷೇಪ ಮಾಡಬಯಸುವುದಿಲ್ಲ’ ಎಂದು ದೇಶದ ನೂತನ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಪೀಠ ಸ್ಪಷ್ಟಪಡಿಸಿತು.
‘ಏಳು ಮಂದಿ ಅಕ್ರಮ ವಾಸಿ ರೊಹಿಂಗ್ಯಾಗಳ ಗುರುತು ಪ್ರಮಾಣ ಪತ್ರ ಮತ್ತು ಒಂದು ತಿಂಗಳ ವೀಸಾವನ್ನು ತಾನು ಜಾರಿ ಮಾಡಿದ್ದು ಅವರ ಗಡೀಪಾರಿಗೆ ಅನುಕೂಲ ಕಲ್ಪಿಸಿದ್ದೇನೆ; ಅಂತೆಯೇ ಮ್ಯಾನ್ಮಾರ್ ದೂತಾವಾಸ ಈ ರೊಹಿಂಗ್ಯಾಗಳನ್ನು ಸ್ವೀಕರಿಸಲು ಒಪ್ಪಿದೆ’ ಎಂದು ಕೇಂದ್ರ ಸರಕಾರ ಹೇಳಿದೆ.
2012ರಲ್ಲಿ ಅಕ್ರಮವಾಗಿ ಭಾರತದೊಳಗೆ ನಸುಳಿ ಬಂದ ಈ ರೊಹಿಂಗ್ಯಾಗಳನ್ನು ಪೊಲೀಸರು ಬಂಧಿಸಿ ಅವರನ್ನು ಜೈಲಿಗೆ ಹಾಕಿತ್ತು. ಇದೀಗ ಅವರ ಜೈಲುವಾಸದ ಅವಧಿ ಮುಗಿದಿರುವ ಕಾರಣ ಅವರನ್ನು ಮ್ಯಾನ್ಮಾರ್ಗೆ ಗಡೀಪಾರು ಮಾಡಲು ಕೇಂದ್ರ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು