ಎನ್‌ಸಿಪಿ  ಹಿರಿಯ ನಾಯಕ ಛಗನ್‌ ಭುಜಬಲ್‌ ಮತ್ತೆ ಶಿವಸೇನೆ ತೆಕ್ಕೆಗೆ?


Team Udayavani, May 23, 2018, 12:21 PM IST

254113.jpg

ಮುಂಬಯಿ : ಅಕ್ರಮ ಹಣ ವರ್ಗಾವಣೆ  ಪ್ರಕರಣದಲ್ಲಿ  ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ  2 ವರ್ಷಗಳ ಕಾಲ ಜೈಲಿನಲ್ಲಿದ್ದ  ಎನ್‌ಸಿಪಿ  ಹಿರಿಯ ನಾಯಕ, ಮಾಜಿ  ಉಪ ಮುಖ್ಯಮಂತ್ರಿ  ಛಗನ್‌ ಭುಜಬಲ್‌ ಅವರು  ಎರಡು ವಾರಗಳ ಹಿಂದೆ  ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಈ  ಬೆಳವಣಿಗೆಯ ಬಳಿಕ  ಛಗನ್‌ ಭುಜಬಲ್‌ ಅವರು  ಮತ್ತೆ  ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆಯೇ  ಎಂಬ  ಚರ್ಚೆಗಳು  ತೀವ್ರಗೊಂಡಿರುವ  ಬೆನ್ನಲ್ಲೇ  ಭುಜಬಲ್‌  ಅವರು  ತನ್ನ  ಮಾತೃಪಕ್ಷ  ಶಿವಸೇನೆಗೆ  ವಾಪಸಾಗಲಿದ್ದಾರೆ ಎಂಬ  ಗುಸು ಗುಸು  ರಾಜ್ಯದ  ರಾಜಕೀಯ ಪಡಸಾಲೆಯಲ್ಲಿ  ಹಬ್ಬಿದೆ. 

ಜೈಲಿನಿಂದ ಬಿಡು ಗಡೆಯಾಗಿ  ಹೊರಬಂದ  ಕೆಲವೇ ದಿನಗಳಲ್ಲಿ  ಭುಜಬಲ್‌ ಅವರ  ಪುತ್ರ  ಪಂಕಜ್‌ ಭುಜಬಲ್‌ ಅವರು  ಶಿವಸೇನೆ ವರಿಷ್ಠ  ಉದ್ಧವ್‌ ಠಾಕ್ರೆ ಅವರ  ನಿವಾಸ “ಮಾತೋಶ್ರೀ’ಗೆ  ಭೇಟಿ ನೀಡಿ  ಉದ್ಧವ್‌ ಅವರೊಂದಿಗೆ  ಮಾತುಕತೆ ನಡೆಸಿದಾಗಿನಿಂದ ಭುಜಬಲ್‌  ಶಿವಸೇನೆಗೆ ಮರಳಲಿದ್ದಾರೆ ಎಂಬ  ಬಗೆಗೆ  ವದಂತಿಗಳು  ಹರಡಲಾರಂಭಿಸಿದ್ದವು.  

ಈ ವದಂತಿಗೆ  ಪುಷ್ಟಿ ಎಂಬಂತೆ ಇದೀಗ  ಶಿವಸೇನೆ  ಕಾರ್ಯದರ್ಶಿ  ಮಿಲಿಂದ್‌ ನಾರ್ವೇಕರ್‌ ಅವರು  ರವಿವಾರದಂದು  ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದು  ಕುತೂಹಲಕ್ಕೆ  ಕಾರಣವಾಗಿದೆ. ಶಿವಸೇನೆಯಿಂದಲೇ  ತಮ್ಮ  ರಾಜಕೀಯ  ಆರಂಭಿಸಿದ್ದ  ಛಗನ್‌ ಭುಜಬಲ್‌  ಅವರು  1991ರಲ್ಲಿ  ಶಿವಸೇನೆ  ಸ್ಥಾಪಕ ಬಾಳಾ ಠಾಕ್ರೆ ಅವರೊಂದಿಗಿನ  ವೈಮನಸ್ಸಿನ  ಕಾರಣದಿಂದಾಗಿ  ಪಕ್ಷವನ್ನು  ತೊರೆದಿದ್ದರು. 

ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದನ್ನು  ನಾರ್ವೇಕರ್‌  ದೃಢಪಡಿಸಿದ್ದಾರೆ. ಸದ್ಯ ಭುಜಬಲ್‌ ಅವರು  ನಗರದ  ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು  ಅಲ್ಲಿಗೇ ತೆರಳಿ  ಭುಜಬಲ್‌ ಅವರೊಂದಿಗೆ  ಮಾತುಕತೆ ನಡೆಸಿರುವುದಾಗಿ  ಅವರು  ಹೇಳಿದರು. ಆದರೆ  ಮಾತುಕತೆಯ  ವಿವರಗಳನ್ನು  ನೀಡಲು  ನಾರ್ವೇಕರ್‌ ನಿರಾಕರಿಸಿದರು. ಈರ್ವರು  ನಾಯಕರು ಸುಮಾರು  ಒಂದು ತಾಸಿಗೂ  ಅಧಿಕ ಸಮಯ  ಮಾತುಕತೆ ನಡೆಸಿದರು ಎನ್ನಲಾಗಿದೆ.  

ಭುಜಬಲ್‌  ಸಕ್ರಿಯ ರಾಜಕಾರಣಕ್ಕೆ ಮರಳುವುದಕ್ಕೂ ಮುನ್ನ ಠಾಕ್ರೆ  ಕುಟುಂಬ ದೊಂದಿಗಿನ  ತನ್ನ ಸಂಬಂಧವನ್ನು  ಸುಧಾರಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದವರ  ಆಪ್ತ ಮೂಲಗಳು ತಿಳಿಸಿವೆ.       

ಆದರೆ  ಶಿವಸೇನೆಯ ಮೂಲಗಳು  ಇದೊಂದು  ಸೌಹಾರ್ದ ಭೇಟಿ  ಎಂದಿದ್ದು  ಅನಾರೋಗ್ಯದ ಕಾರಣದಿಂದಾಗಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಭುಜಬಲ್‌ ಅವರ ಯೋಗಕ್ಷೇಮವನ್ನು  ವಿಚಾರಿಸಲು ನಾರ್ವೇಕರ್‌ ಆಸ್ಪತ್ರೆಗೆ ಭೇಟಿ ನೀಡಿದ್ದರೇ ಹೊರತು ಭೇಟಿಯ ವೇಳೆ  ಯಾವುದೇ ರಾಜಕೀಯ ವಿಚಾರಗಳು  ಚರ್ಚೆಗೆ ಬರಲಿಲ್ಲ ಎಂದು ಸ್ಪಷ್ಟಪಡಿಸಿವೆ. 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.