ಶಹೀನಾಬಾಗ್ ಸದ್ಯದಲ್ಲೇ ಜಲಿಯನ್ವಾಲಾ ಬಾಗ್ ಆಗಲಿದೆ: ಒವೈಸಿ ಆತಂಕ
ಹಿಟ್ಲರ್ ಜರ್ಮನಿಯಲ್ಲಿ ಯಹೂದಿಯರ ನರಮೇಧಕ್ಕೂ ಮುನ್ನ ಎರಡು ಜನಗಣತಿ ನಡೆಸಿದ್ದ!
Team Udayavani, Feb 6, 2020, 9:46 AM IST
ಹೈದ್ರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರರಾಜಧಾನಿ ದೆಹಲಿಯ ಶಹೀನಾಬಾಗ್ ಪ್ರದೇಶದಲ್ಲಿ ನಡೆಸುತ್ತಿರುವ ಪ್ರತಿಭಟನೆ 50 ದಿನಗಳನ್ನು ಪೂರೈಸಿದೆ. ಈ ನಡುವೆ ಶಹೀನಾಬಾಗ್ ಹೋರಾಟವನ್ನು ಹತ್ತಿಕ್ಕಿಲು ಕೇಂದ್ರ ಸರಕಾರ ಸದ್ಯದಲ್ಲೇ ಬಲಪ್ರಯೋಗ ನಡೆಸಬಹುದೆಂಬ ಆತಂಕವನ್ನು ಎಐಎಂಐಎಂ ಪಕ್ಷದ ನಾಯಕ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಅವರು ವ್ಯಕ್ತಪಡಿಸಿದ್ದಾರೆ.
ದೆಹಲಿ ಚುನಾವಣೆಯ ಬಳಿಕ ಕೇಂದ್ರ ಸರಕಾರವು ಶಹೀನಾಬಾಗ್ ಹೋರಾಟಗಾರರ ಮೇಲೆ ಬಲ ಪ್ರಯೋಗ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಿರುವ ಒವೈಸಿ ಅವರು, ‘ಹೋರಾಟಗಾರರ ಮೇಲೆ ಅವರು ಗುಂಡು ಹಾರಿಸಬಹುದು, ಶಹೀನಾ ಬಾಗ್ ಅನ್ನು ಅವರು ಇನ್ನೊಂದು ಜಲಿಯನ್ವಾಲಾ ಬಾಗ್ ಆಗಿ ಪರಿವರ್ತಿಸಬಹುದು. ಬಿಜೆಪಿ ಸಚಿವರೇ ‘ಗುಂಡು ಹಾರಿಸಿ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆಲ್ಲಾ ಸೂಕ್ತ ಉತ್ತರ ಕೇಂದ್ರ ಸರಕಾರದ ಕಡೆಯಿಂದ ಬರಬಹುದು’ ಎಂದು ಒವೈಸಿ ಹೇಳಿದ್ದಾರೆ.
ಫೆಬ್ರವರಿ 8ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು ಆ ದಿನದಂದು ಶಹೀನಾಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಲಪ್ರಯೋಗದಿಂದ ತೆರವುಗೊಳಿಸುವ ಸಾಧ್ಯತೆಗಳಿವೆ ಎಂಬ ವರದಿಯ ಹಿನ್ನಲೆಯಲ್ಲಿ ಒವೈಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
‘2024ರವರೆಗೆ ದೇಶದಲ್ಲಿ ಎನ್.ಸಿ.ಆರ್. ಜಾರಿಗೊಳಿಸುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಹೇಳಬೇಕು. ಸುಮಾರು 3,900 ಕೋಟಿ ರೂಪಾಯಿಗಳನ್ನು ಎನ್.ಪಿ.ಆರ್.ಗೋಸ್ಕರ ಸರಕಾರ ವ್ಯಯಿಸುತ್ತಿರುವುದಾದರೂ ಯಾಕೆ. ನಾನೊಬ್ಬ ಇತಿಹಾಸದ ವಿದ್ಯಾರ್ಥಿಯಾಗಿದ್ದು ಇದಕ್ಕೆ ಉತ್ತರವನ್ನು ಹೀಗೆಂದು ಕಂಡುಕೊಂಡಿದ್ದೇನೆ, ಹಿಟ್ಲರ್ ತನ್ನ ಆಡಳಿತಾವಧಿಯಲ್ಲಿ ಜರ್ಮನಿಯಲ್ಲಿ ಎರಡೆರಡು ಬಾರಿ ಜನಗಣತಿ ನಡೆಸಿದ್ದ ಮತ್ತು ಆ ಬಳಿಕವಷ್ಟೇ ಆತ ಯಹೂದಿಯರನ್ನು ಗ್ಯಾಸ್ ಚೇಂಬರ್ ಗೆ ತಳ್ಳಿದ್ದ. ನನ್ನ ದೇಶ ಇನ್ನೊಂದು ಜರ್ಮನಿಯಾಗಲು ನಾನು ಬಿಡುವುದಿಲ್ಲ’ ಎಂದು ಅಸಾದುದ್ದೀನ್ ಒವೈಸಿ ಅವರು ಎನ್.ಪಿ.ಆರ್. ಹಾಗೂ ಎನ್.ಆರ್.ಸಿ. ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ