ಸುರೇಶ್ ರೈನಾ ಸಹಾಯಕ್ಕೆ ಬಂದ ಸೋನು ಸೂದ್ : ಕೇವಲ 10 ನಿಮಿಷದಲ್ಲಿ ಆಕ್ಸಿಜನ್ ಒದಗಿಸಿದ ನಟ
Team Udayavani, May 7, 2021, 7:52 AM IST
ನವದೆಹಲಿ : ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಅವರ 65 ವರ್ಷದ ಚಿಕ್ಕಮ್ಮ ( aunt) ಕೋವಿಡ್ ಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಗಂಭಿರವಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಗಾಗಿ ಸರೇಶ್ ರೈನಾ ಅಲೆದಾಟ ನಡೆಸಿದ್ದು, ಟ್ವಿಟರ್ ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಮನವಿ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬರೆದಿದ್ದ ರೈನಾ, ಮೀರತ್ ನ ನಮ್ಮ ಆಂಟಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್ ಬೇಕಾಗಿದೆ. ಅವರ ಆಕ್ಸಿಜನ್ ಮಟ್ಟ 91 ಇದ್ದು, ಸಹಾಯ ಮಾಡುವಂತೆ ಕೇಳಿದ್ದರು.
Urgent requirement of an oxygen cylinder in Meerut for my aunt.
Age – 65
Hospitalised with Sever lung infection.
Covid +
SPO2 without support 70
SPO2 with support 91Kindly help with any leads.@myogiadityanath
— Suresh Raina?? (@ImRaina) May 6, 2021
ಈ ಟ್ವೀಟ್ ನೋಡಿದ ಬಹುಭಾಷಾ ನಟ ಸೋನು ಸೂದ್, ತಕ್ಷಣಕ್ಕೆ ರೈನಾ ನೆರವಿಗೆ ನಿಂತಿದ್ದಾರೆ. ಕೆಲವೇ ನಿಮಿಷದಲ್ಲಿ ಆಕ್ಸಿಜನ್ ತಲುಪಲಿದೆ ಸಹೋದರ ಎಂದು ಟ್ವೀಟ್ ಮೂಲಕ ರೈನಾಗೆ ಸೋನು ಸೂದ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೌಂಡೇಶನ್ ಮೂಲಕ ಸೋನು ಸೂದ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ.
Oxygen cylinder reaching in 10 mins bhai. ☑️@Karan_Gilhotra @SoodFoundation https://t.co/BQHCYZJYkV
— sonu sood (@SonuSood) May 6, 2021
ಕಷ್ಟಕಾಲದಲ್ಲಿ ಸಹಾಯ ಮಾಡಿದ ನಟನಿಗೆ ಸುರೇಶ್ ರೈನಾ ಧನ್ಯವಾದ ತಿಳಿಸಿದ್ದು, ನಿಮ್ಮಿಂದ ದೊಡ್ಡ ಉಪಕಾರ ಆಗಿದೆ. ದೇವರು ನಿಮಗೆ ಆಶೀರ್ವಾದ ಮಾಡಲಿ ಎಂದು ಹಾರೈಸಿದ್ದಾರೆ.
ಇನ್ನು ಸೋನು ಸೂದ್ ಮೊದಲ ಬಾರಿಗೆ ಭಾರತ ಲಾಕ್ ಡೌನ್ ಆದ ವೇಳೆಯಲ್ಲಿ ವಲಸೆ ಕಾರ್ಮಿಕರಿಗೆ ತುಂಬಾ ಸಹಾಯ ಮಾಡಿದ್ದರು. ದುರ್ಬಲ ವರ್ಗದವರಿಗೆ ನಟ ಸಹಾಯ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವುದೇ ಸಹಾಯವನ್ನು ಕೋರಿದರೂ ಅದು ತಮ್ಮಿಂದ ಸಾಧ್ಯವಾದರೇ ಸೂನು ಈಡೇರಿಸಿಯೇ ತೀರುತ್ತಾರೆ ಎಂಬುದಕ್ಕೆ ರೈನಾ ಅವರ ಆಂಟಿಗೆ ಸಹಾಯ ಮಾಡಿರುವುದೇ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ