ಸದೃಢವಾಗಿದೆ ಅರ್ಥ ವ್ಯವಸ್ಥೆ
Team Udayavani, Jun 27, 2018, 2:56 PM IST
ಮುಂಬಯಿ: ದೇಶದ ಅರ್ಥವ್ಯವಸ್ಥೆಯ ಸಣ್ಣ ವಿಚಾರವೂ ಸುವ್ಯವಸ್ಥಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿತ್ತೀಯ ಶಿಸ್ತು ಕಾಪಾಡಿಕೊಳ್ಳುವುದೇ ತಮ್ಮ ನೇತೃತ್ವದ ಸರಕಾರದ ಆದ್ಯತೆ ಎಂದು ಅವರು ಹೇಳಿದ್ದಾರೆ. ಮುಂಬಯಿಯಲ್ಲಿ ಮಂಗಳವಾರ ಏಷ್ಯಾ ಅಭಿವೃದ್ಧಿ ಹೂಡಿಕೆ ಬ್ಯಾಕ್(ಎಐಐಬಿ)ನ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ತೈಲೋತ್ಪನ್ನಗಳ ದರಗಳಲ್ಲಿ ಏರಿಕೆಯಾಗುತ್ತಿದ್ದರೂ ಹಣದುಬ್ಬರ ನಿಯಂತ್ರಣದ ಮಿತಿಯಲ್ಲಿಯೇ ಇದೆ. ಸರಕಾರ ಹೊಂದಿರುವ ಸಾಲದ ಪ್ರಮಾಣ ಇಳಿಕೆಯಾಗಿದೆ. ನಮ್ಮ ಅರ್ಥ ವ್ಯವಸ್ಥೆಗೆ ದೀರ್ಘ ಕಾಲದ ಬಳಿಕ ಉತ್ತಮ ರ್ಯಾಂಕಿಂಗ್ ಲಭ್ಯವಾಗಿದೆ ಎಂದರು.