ಅವಹೇಳನ ಆರೋಪ ದತ್ಗೆ ಸಮನ್ಸ್ ಜಾರಿ
Team Udayavani, Oct 27, 2017, 6:20 AM IST
ಲಕ್ನೋ: ಬಾಲಿವುಡ್ ನಟ ಸಂಜಯ ದತ್ಗೆ ಬಾರಾಬಂಕಿ ಜಿಲ್ಲೆಯ ಕೋರ್ಟೊಂದು ಸಮನ್ಸ್ ಜಾರಿ ಮಾಡಿದೆ. 2009ರ ಲೋಕಸಭೆ ಚುನಾವಣೆ ವೇಳೆ ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಪದ ಪ್ರಯೋಗಿಸಿದ್ದರ ವಿರುದ್ಧ ದೂರು ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಬಾರಾಬಂಕಿಯ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜಯ ದತ್ಗೆ ಸಮನ್ಸ್ ಜಾರಿ ಮಾಡಿ, ನ.16ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಪ್ರಚಾರದ ವೇಳೆ ದತ್ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ
ಮಾಡಿದ್ದರು. ಅವರು ನಟಿಸಿದ “ಮುನ್ನಾಬಾಯಿ ಎಂಬಿಬಿಎಸ್’ನ ಪದ ಅದಾಗಿತ್ತು. ಅದಕ್ಕೆ ಅಲಹಾಬಾದ್ ಹೈಕೋರ್ಟ್ ಕೂಡ ಆಕ್ಷೇಪಿಸಿತ್ತು.