“ಜ್ಞಾನವಾಪಿ’ಯಲ್ಲಿ ಲಿಂಗಪೂಜೆ: ಸುಪ್ರೀಂ ನಕಾರ
Team Udayavani, Jul 22, 2022, 6:30 AM IST
ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆ ಗುರುವಾರದಂದು ಸುಪ್ರೀಂ ಕೋರ್ಟ್ನಲ್ಲಿ ಜರುಗಿದ್ದು ಪೂಜೆಗೆ ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಹಾಗೂ ಶಿವಲಿಂಗದ ಸೃಷ್ಟಿಯಾದ ಕಾಲ ಪತ್ತೆ ಹಚ್ಚಬೇಕೆಂದು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ.
ಹಾಗೆಯೇ ಮಸೀದಿಯ ಆವರಣ ಸಮೀಕ್ಷೆಗೆ, ವಾರಾಣಸಿ ಜಿಲ್ಲಾ ನ್ಯಾಯಾಲಯ ನೇಮಿಸಿದ್ದ ಆಯುಕ್ತರ ಸಮಿತಿಯ ಔಚಿತ್ಯವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ಗೆ ಮುಂದೂಡಿದೆ. ಸದ್ಯಕ್ಕೆ ಈ ವಿಚಾರ ಅಲಹಾಬಾದ್ ಹೈಕೋರ್ಟ್ ಅಧೀನದಲ್ಲಿ ವಿಚಾರಣೆಯಲ್ಲಿದೆ. ಆ ಪ್ರಕರಣದ ತೀರ್ಪು ಅಕ್ಟೋಬರ್ಗೆ ಬರುವ ಸಾಧ್ಯತೆಗಳಿದ್ದು ಅಲ್ಲಿಯವರೆಗೆ ಈ ಅರ್ಜಿಯನ್ನು ವಿಚಾರಣೆಗೊಳಪಡಿಸಲು ಆಗದು ಎಂದು ನ್ಯಾಯಪೀಠ ತಿಳಿಸಿದೆ.
ಇದರ ಜೊತೆಗೆ, ಮಸೀದಿಯ ಆವರಣದಲ್ಲಿ ಸಿಕ್ಕಿರುವ ಲಿಂಗವು ಯಾವಾಗ ಸೃಷ್ಟಿಯಾಗಿತ್ತೆಂಬುದನ್ನು ಕಾರ್ಬನ್ ಡೇಟಿಂಗ್ ತಂತ್ರಜ್ಞಾನ ಹಾಗೂ ರೇಡಾರ್ ಸರ್ವೆಗೆ ಆಗ್ರಹಿಸಿ ಏಳು ಪ್ರತ್ಯೇಕ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಕೂಡ ನ್ಯಾಯಪೀಠ ತಿರಸ್ಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?