ರೈಲು ಲೇಟಾಗಿದ್ದಕ್ಕೆ 4 ಲಕ್ಷ ಪರಿಹಾರ!
Team Udayavani, Aug 25, 2021, 6:40 AM IST
ಹೊಸದಿಲ್ಲಿ: ತೇಜಸ್ ರೈಲು ಲೇಟಾಗಿ ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ 4 ಲಕ್ಷ ರೂ. ಪರಿಹಾರ ನೀಡಲು ಐಆರ್ಸಿಟಿಸಿ ಮುಂದಾಗಿದೆ.
ಕಳೆದ ಶನಿವಾರ ದಿಲ್ಲಿ ರೈಲು ನಿಲ್ದಾಣಕ್ಕೆ ತೇಜಸ್ ರೈಲು ಎರಡೂವರೆ ಗಂಟೆ ತಡವಾಗಿ ಬಂದಿದೆ. ಮಳೆಯಿಂದಾಗಿ ಸಿಗ್ನಲ್ ತೊಂದರೆಯುಂಟಾದ ಹಿನ್ನೆಲೆ ರೈಲು ತಡವಾಗಿದೆ. ಅದೇ ರೀತಿ ರವಿವಾರ ಲಕ್ನೋ- ಹೊಸದಿಲ್ಲಿ ರೈಲು 1 ಗಂಟೆ ತಡವಾಗಿ ಆಗಮಿಸಿದೆ.
ಐಆರ್ಸಿಟಿಸಿ ಈ ಮೊದಲು ಹೇಳಿರುವಂತೆ ತೇಜಸ್ ರೈಲು 1 ಗಂಟೆ ತಡವಾದರೆ ತಲಾ 100 ರೂ. ಹಾಗೂ 2 ತಾಸು ಅಥವಾ ಅದಕ್ಕಿಂತ ಹೆಚ್ಚು ಸಮಯ ತಡವಾದರೆ 250 ರೂ. ಪರಿಹಾರವನ್ನು ಪ್ರಯಾಣಿಕರಿಗೆ ನೀಡಬೇಕು. ಹೀಗಾಗಿ ಎರಡೂ ರೈಲಿನ 2,035 ಪ್ರಯಾಣಿಕರಿಗೆ 4,49,600 ರೂ. ಸಿಗಲಿದೆ ಎಂದು ಐಆರ್ಸಿಟಿಸಿ ತಿಳಿಸಿದೆೆ.