ಅಮರನಾಥ ಯಾತ್ರೆಗೆ ಚಾಲನೆ: ಭದ್ರತೆಗೆ 60 ಸಾವಿರ ಸಿಬಂದಿ
ಮೊದಲ ತಂಡದಲ್ಲಿ 2,000 ಕ್ಕೂ ಹೆಚ್ಚು ಯಾತ್ರಿಗಳ ಪ್ರಯಾಣ
Team Udayavani, Jun 30, 2019, 10:30 AM IST
ಜಮ್ಮು: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಗೆ ಭಾನುವಾರ ಬೆಳಗ್ಗೆ ಚಾಲನೆ ದೊರಕಿದೆ. ವ್ಯಾಪಕ ಭದ್ರತೆಯ ನಡುವೆ ಮೊದಲ ತಂಡ ಗುಹಾಂತರ ದೇಗುಲಕ್ಕೆ ಪ್ರಯಾಣ ಆರಂಭಿಸಿದೆ.
45 ದಿನಗಳ ಕಾಲ ನಡೆಯುವ ಪವಿತ್ರ ಯಾತ್ರೆ ಅಗಸ್ಟ್ 15 ರ ಶ್ರಾವಣ ಪೂರ್ಣಿಮೆಯವರೆಗೆ ನಡೆಯಲಿದೆ.3,888 ಮೀಟರ್ ಎತ್ತರದಲ್ಲಿರುವ ಹಿಮ ಲಿಂಗದ ದರ್ಶನಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೆ ಕಾಶ್ಮೀರಕ್ಕೆ ತೆರಳಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಬಾಲ್ತಾಲ್ ಬೇಸ್ ಕ್ಯಾಂಪ್ನಿಂದ 1,051 ಮಂದಿ ಯಾತ್ರಿಕರು, ಪಹಲ್ಗಾಮ್ ಬೇಸ್ ಕ್ಯಾಂಪ್ನಿಂದ 1,183 ಮಂದಿ ಯಾತ್ರೆ ಆರಂಭಿಸಿದ್ದಾರೆ. ಯಾತ್ರಿಗಳ ಪೈಕಿ 333 ಮಹಿಳೆಯರು, 45 ಸಾಧುಗಳು ಮತ್ತು 17 ಮಕ್ಕಳು ಸೇರಿದ್ದಾರೆ.
ಭಾನುವಾರ 3 ಗಂಟೆಯ ವರೆಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಏಕಮುಕ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾತ್ರಿಕರು ಜವಹಾರ್ ಗುಹೆಯನ್ನು ದಾಟಿದ ಬಳಿಕ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ.
ಯಾತ್ರಿಕರ ಸಂಪೂರ್ಣ ಭದ್ರತೆಗಾಗಿ 60 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!