ದೂರಿದೊಡನೆ ಆರ್ಥಿಕತೆ ಸರಿಯಾಗಲ್ಲ
Team Udayavani, Oct 18, 2019, 5:29 AM IST
ಮುಂಬಯಿ: “ಕೇವಲ ವಿಪಕ್ಷಗಳ ಮೇಲೆ ಆರೋಪ ಮಾಡುವುದ ರಿಂದ ಆರ್ಥಿಕತೆ ಹಳಿಗೆ ಬರುವುದಿಲ್ಲ. ಕೇಂದ್ರ ಸರಕಾರವು ಪ್ರತಿ ಪಕ್ಷಗಳನ್ನು ದೂರುವುದರಲ್ಲೇ ನಿರತವಾ ಗಿರುವ ಕಾರಣ, ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ.’
ಹೀಗೆಂದು ಹೇಳಿರುವುದು ಮಾಜಿ ಪ್ರಧಾನಿ ಡಾ.| ಮನಮೋಹನ್ ಸಿಂಗ್. ಮುಂಬಯಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. “ಡಾ| ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ, ರಘುರಾಂ ರಾಜನ್ ಆರ್ಬಿಐ ಗವರ್ನರ್ ಆಗಿದ್ದಾಗ ದೇಶದ ಬ್ಯಾಂಕುಗಳು ಕೆಟ್ಟ ದಿನಗಳನ್ನು ಅನುಭವಿಸಿದವು’ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಸಿಂಗ್ ತಿರುಗೇಟು ನೀಡಿದ್ದಾರೆ.
ಆರಂಭದಲ್ಲಿ, “ನಿರ್ಮಲಾ ಹೇಳಿಕೆಗೆ ನಾನು ಪ್ರತಿ ಕ್ರಿಯಿಸುವುದಿಲ್ಲ’ ಎಂದು ಹೇಳಿದ ಮಾಜಿ ಪಿಎಂ ಸಿಂಗ್, ಅನಂತರ ಸರಕಾರದ ನೀತಿಗಳನ್ನು ಟೀಕಿಸುತ್ತಾ, ನಿರ್ಮಲಾ ಹೇಳಿಕೆಗೂ ಪ್ರತ್ಯುತ್ತರ ಕೊಟ್ಟರು.
“ಜನ ಕೇಂದ್ರಿತ ನೀತಿಗಳನ್ನು ಜಾರಿ ಮಾಡುವಲ್ಲಿ ಸರಕಾರ ವಿಫಲವಾಗಿರುವುದು, ನಿರ್ಮಲಾ ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತಿದೆ. ಬಿಕ್ಕಟ್ಟಿನಲ್ಲಿರುವ ಆರ್ಥಿಕತೆ ಯನ್ನು ಸರಿಪಡಿಸಬೇಕೆಂದರೆ, ಮೊದಲು ಸರಕಾರ ಆ ಸಮಸ್ಯೆಯ ಮೂಲ ಮತ್ತು ಕಾರಣವನ್ನು ಪತ್ತೆ ಹಚ್ಚ ಬೇಕು. ಆದರೆ, ಸರಕಾರ ಮಾತ್ರ ವಿಪಕ್ಷಗಳನ್ನು ಹಳಿ ಯು ವುದರಲ್ಲೇ ಕಾಲಹರಣ ಮಾಡುತ್ತಿದೆ. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ’ ಎಂದು ಸಿಂಗ್ ಹೇಳಿದರು.
ಪಿಎಂಸಿ ಬ್ಯಾಂಕ್ ಹಗರಣ ಕುರಿತೂ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತು ಆರ್ಬಿಐ ಕೂಡಲೇ 16 ಲಕ್ಷ ಠೇವಣಿದಾರರಿಗೆ ನ್ಯಾಯ ಒದಗಿಸ ಬೇಕು. ಸರಕಾರದ ಕೆಟ್ಟ ನೀತಿಗಳು ಭಾರತೀಯರ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರದಲ್ಲಿ ಅನೇಕ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ, ನಿರುದ್ಯೋಗ ತಾಂಡವವಾಡುತ್ತಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ ಎಂದೂ ಸಿಂಗ್ ಆರೋಪಿಸಿದರು.
370ನೇ ವಿಧಿಗೆ ಕಾಂಗ್ರೆಸ್ ಬೆಂಬಲ: 370ನೇ ವಿಧಿ ರದ್ದು ವಿಧೇಯಕದ ಪರವೇ ಕಾಂಗ್ರೆಸ್ ಮತ ಚಲಾಯಿಸಿದೆ. ಆದರೆ, ಇದೊಂದು ತಾತ್ಕಾಲಿಕ ಕ್ರಮ ಎಂದು ನಾವು ಭಾವಿಸುತ್ತೇವೆ. ಬದಲಾವಣೆ ತರ ಬೇಕೆಂದರೆ, ಅದು ಕಾಶ್ಮೀರದ ಜನರ ಸದ್ಭಾವನೆ ಯೊಂದಿಗೆ ತರಬೇಕು ಎಂದ ಸಿಂಗ್, ಬಿಜೆಪಿ ಮತ್ತು ಆರೆಸ್ಸೆಸ್ನಿಂದ ಕಾಂಗ್ರೆಸ್ ದೇಶಭಕ್ತಿಯ ಪ್ರಮಾಣಪತ್ರ ಪಡೆಯಬೇಕಾಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ