Mutton Shanks; ಮೆನುವಿನಲ್ಲಿ ಮಟನ್ ಮೂಳೆ ಇಲ್ಲವೆಂದು ಮದುವೆ ರದ್ದು ಮಾಡಿದ ವರನ ಕಡೆಯವರು!
Team Udayavani, Dec 26, 2023, 10:12 AM IST
ಹೈದರಾಬಾದ್: ವರದಕ್ಷಿಣೆ ವಿಚಾರದಲ್ಲಿ ಗಲಾಟೆ ನಡೆದು ಮದುವೆ ರದ್ದಾದ ಪ್ರಸಂಗ ನೋಡಿದ್ದೇವೆ. ಆದರೆ ಊಟದ ವಿಚಾರಕ್ಕೆ ಮದುವೆ ಮುರಿದ ಘಟನೆ ಬಗ್ಗೆ ಕೇಳಿದ್ದೀರಾ? ಊಟದ ಮೆನುವಿನಲ್ಲಿ ಮಟನ್ ಮೂಳೆ ಇಲ್ಲವೆಂದು ಸಿಟ್ಟಿಗೆದ್ದ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಿಜಾಮಾಬಾದ್ ಮೂಲದ ವಧು ಮತ್ತು ಜಗ್ತಿಯಾಲ್ ಮೂಲದ ವರನ ಮದುವೆ ನಿಶ್ಚಿತಾರ್ಥವು ನವೆಂಬರ್ ನಲ್ಲಿ ವಧುವಿನ ನಿವಾಸದಲ್ಲಿ ನಡೆದಿದೆ. ಆದರೆ ಬಳಿಕ ಮದುವೆ ರದ್ದು ಮಾಡಲಾಗಿದೆ.
ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ನಿಶ್ಚಿತಾರ್ಥ ಸಮಾರಂಭದ ಬಳಿಕ ಗಲಾಟೆ ಆರಂಭವಾಗಿದೆ. ಊಟದಲ್ಲಿ ಮಟನ್ ಮೂಳೆ ಇಲ್ಲವೆಂದು ವರನ ಕಡೆಯವರು ಪ್ರಶ್ನೆ ಮಾಡಿದ್ದಾರೆ. ಈಗ ವಧುವಿನ ಕಡೆಯವರು ಮಟನ್ ಮೂಳೆಯನ್ನು ಮಾಡಿಸಿಲ್ಲ ಎಂದಿದ್ದಾರೆ. ಆಗ ಗಲಾಟೆ ಜೋರಾಗಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಇದನ್ನೂ ಓದಿ:INDvsSA; ಈ ಸರಣಿಯಲ್ಲಿ ದ್ರಾವಿಡ್, ಸೆಹವಾಗ್ ದಾಖಲೆ ಮುರಿಯಲಿದ್ದಾರೆ ವಿರಾಟ್
ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಜಗಳವನ್ನು ಪರಿಹರಿಸಲು ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು “ಅವಮಾನ”ಗೊಂಡ ವರನ ಗುಂಪು ಪಟ್ಟುಬಿಡಲಿಲ್ಲ.
ಮೆನುವಿನಲ್ಲಿ ಮಟನ್ ನಳ್ಳಿ ಮೂಳೆ ಇಲ್ಲ ಎಂಬ ವಿಚಾರವನ್ನು ವಧುವಿನ ಕುಟುಂಬವು ಉದ್ದೇಶಪೂರ್ವಕವಾಗಿ ನಮ್ಮಿಂದ ದೂರವಿಟ್ಟಿದೆ ಎಂದು ಅವರು ವಾದಿಸಿದರು. ಅಂತಿಮವಾಗಿ, ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸುವುದರೊಂದಿಗೆ ನಿಶ್ಚಿತಾರ್ಥವು ಕೊನೆಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್