ರಾಹುಲ್ಗೆ ಅಂಟಿಕೊಂಡ ಹಿಂದೂಯೇತರ ವಿವಾದ
Team Udayavani, Nov 30, 2017, 6:00 AM IST
ಅಹ್ಮದಾಬಾದ್: ಗುಜರಾತ್ ಚುನಾವಣ ಪ್ರಚಾರದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ
ಹಿಂದೂ ವಿವಾದ ಅಂಟಿಕೊಂಡಿದೆ.
ಬುಧವಾರವಷ್ಟೇ ಸೋಮನಾಥ ದೇಗುಲಕ್ಕೆ ಪಕ್ಷದ ಮತ್ತೂಬ್ಬ ನಾಯಕ ಅಹ್ಮದ್ ಪಟೇಲ್ ಜತೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲೇ ಇದ್ದ “ಹಿಂದೂಯೇತರ ರಿಜಿಸ್ಟ್ರಿ’ ಪುಸ್ತಕ ದಲ್ಲಿ ಸಹಿ ಮಾಡಿದ್ದಾರೆ ಎಂದು ಹೇಳಲಾಗು ತ್ತಿದೆ. ಈ ಸಂಬಂಧ ರಿಜಿಸ್ಟರ್ ಪುಟದ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಾಕಿರುವ ಬಿಜೆಪಿ, ರಾಹುಲ್ ತಾನು ಹಿಂದೂ ಅಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಛೇಡಿಸಿದೆ.
ಇದಾದ ಬಳಿಕ ಟ್ವಿಟರ್ನಲ್ಲೂ ಸೋಮನಾಥ ದೇಗುಲ ಹೆಸರಲ್ಲಿ ಟ್ರೆಂಡಿಂಗ್ ಶುರುವಾಗಿದ್ದು ಪರ-ವಿರೋಧಗಳ ಚರ್ಚೆಯೂ ಆರಂಭ ವಾಗಿದೆ. ವಿವಾದ ಬಿಸಿಯೇರುತ್ತಿದ್ದಂತೆ ಎಚ್ಚೆತ್ತು ಕೊಂಡ ಕಾಂಗ್ರೆಸ್ ನಾಯಕರು, ರಾಹುಲ್ ಯಾವುದೇ ರಿಜಿಸ್ಟ್ರಿಗೆ ಸಹಿ ಮಾಡಿಲ್ಲ. ಅವರ ಕೈಬರಹವೂ ಆ ರೀತಿ ಇಲ್ಲ ಎಂದಿರುವುದಲ್ಲದೇ ಅದು ನಕಲಿ ರಿಜಿಸ್ಟ್ರಿಯ ಫೋಟೋ ಎಂಬ ಸ್ಪಷ್ಟನೆಯನ್ನೂ ನೀಡಿದೆ.
ಬುಧವಾರ ದೇಗುಲಕ್ಕೆ ರಾಹುಲ್ ಬಂದು ಹೋಗುತ್ತಿದ್ದಂತೆ ಅಲ್ಲಿನ ರಿಜಿಸ್ಟರ್ ಪುಟದ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಾಕಿರುವ ಬಿಜೆಪಿಯ ಅಮಿತ್ ಮಾಳವೀಯ, “ರಾಹುಲ್ ತಾವು ಹಿಂದೂ ಅಲ್ಲ ಎಂದು ಕೊನೆಗೂ ಒಪ್ಪಿಕೊಂಡಿದ್ದಾರೆ. ಅವರು ಹಿಂದೂ ಅಲ್ಲ ದಿದ್ದರೆ, ಚುನಾವಣೆಯ ಈ ಸಂದರ್ಭ ಗಳಲ್ಲಿ ದೇಗುಲಗಳಿಗೆ ಭೇಟಿ ನೀಡಿ ಹಿಂದೂ ಮತದಾರರನ್ನು ಏಕೆ ಮೂರ್ಖರನ್ನಾಗಿಸು ತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪತ್ರಿಕಾಗೋಷ್ಠಿ ನಡೆಸಿ ಉತ್ತರ ಕೊಟ್ಟ ಪಕ್ಷದ ವಕ್ತಾರ ರಣದೀಪ್ ಸುಜೇìವಾಲ, “ರಾಹುಲ್ ಗಾಂಧಿ ಒಬ್ಬ ಹಿಂದೂ. ರಾಹುಲ್ ಕೇವಲ ಹಿಂದೂ ಅಷ್ಟೇ ಅಲ್ಲ, ಅವರು ಜನಿವಾರ ಧಾರಿ(ಬ್ರಾಹ್ಮಣ) ಹಿಂದೂ ಆಗಿದ್ದಾರೆ. ಈ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿ ಕೊಳ್ಳಬಾರದು’ ಎಂದು ಹೇಳಿದ್ದಾರೆ.
ಈ ಮಧ್ಯೆ, ರಾತ್ರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ನ ದೀಪೇಂದ್ರ ಹೂಡಾ, “”ರಾಹುಲ್ ಗಾಂಧಿ ಮಹಾ ಶಿವಭಕ್ತ. ಅವರು ಸತ್ಯವನ್ನು ನಂಬುತ್ತಾರೆ. ಹಾಗಾಗಿ, ಸತ್ಯವೇ ಜಯಿಸುತ್ತದೆ” ಎಂದರಲ್ಲದೆ, “”ಮತ ದಾರರ ಗಮನವನ್ನು ರಾಹುಲ್ ಕಡೆಯಿಂದ ವಿಮುಖಗೊಳಿಸಲು ಬಿಜೆಪಿ ಇಂಥ ತಂತ್ರಗಳನ್ನು ಅನುಸರಿ ಸುತ್ತಿದೆ” ಎಂದು ಟೀಕಿಸಿದರು. ಅಲ್ಲದೆ, ಈ ರಿಜಿಸ್ಟ್ರಿಯೇ ನಕಲಿ ಎಂದು ಹೇಳಿದರು.
ಆದರೆ, ಪರಿಸ್ಥಿತಿ ತಾರಕಕ್ಕೇರಿದ್ದನ್ನು ಗಮನಿಸಿದ ಗುಜರಾತ್ನ ಹಿರಿಯ ಪತ್ರಕರ್ತ, ಬ್ರಜೇಶ್ ಕೆ.ಸಿಂಗ್ ಅವರು ಸ್ಪಷ್ಟನೆ ನೀಡಿದ್ದು, ಇದು ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಅವರ ತಪ್ಪು ಎಂದಿದ್ದಾರೆ. ಅಲ್ಲದೆ ರಾಹುಲ್ ಅವರೇ ಸಹಿ ಮಾಡಿದ್ದರೆ, ರಾಹುಲ್ ಜೀ ಎಂದು ಏಕೆ ಬರೆಯುತ್ತಿದ್ದರು ಎಂಬ ಪ್ರಶ್ನೆಗಳನ್ನೂ ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಆದರೆ, ಕೆಲವೇ ನಿಮಿಷಗಳಲ್ಲಿ ತ್ಯಾಗಿ ಅವರು ಇದಕ್ಕೆ ತದ್ವಿರುದ್ಧವಾದ ಸ್ಪಷ್ಟನೆ ನೀಡಿದರು. ತಾವು ರಿಜಿಸ್ಟ್ರಿಯಲ್ಲಿ ಕೇವಲ ತಮ್ಮ ಹೆಸರನ್ನು ಮಾತ್ರ ಬರೆದಿದ್ದು, ಬೇರ್ಯಾರ ಹೆಸರನ್ನೂ ಬರೆಯಲಿಲ್ಲ. ರಾಹುಲ್ ದೇಗುಲಕ್ಕೆ ಭೇಟಿ ನೀಡಿ ಹೊರಬಂದ ಬಳಿಕ ಯಾರೋ ಈ ಹೆಸರುಗಳನ್ನು ಇದರಲ್ಲಿ ಸೇರಿಸಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ಗೋಜಲನ್ನಾಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
ಕಾರ್ತಿಕ್ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?
Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ
The Judgement; ಭವಿಷ್ಯ ನಿರ್ಧರಿಸುವ ಜಡ್ಜ್ಮೆಂಟ್: ರವಿಚಂದ್ರನ್
Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್