ಈ ಎಲ್ಲಾ ಕೆಲಸ ಕಾರ್ಯಗಳಿಗೆ ಪಾನ್ಕಾರ್ಡ್ ಕಡ್ಡಾಯ
Team Udayavani, Nov 2, 2019, 9:22 PM IST
ತೆರಿಗೆ ವಂಚನೆ ಹಾಗೂ ನಕಲಿ ಕಂಪನಿಗಳನ್ನು ತಡೆಯುವ ಉದ್ದೇಶದಿಂದ ಸರಕಾರ ಪಾನ್ಕಾರ್ಡ್ ಕಡ್ಡಾಯ ಕ್ರಮವನ್ನು ಜಾರಿ ಮಾಡಿತ್ತು. ಆದರೆ ಈ ಯೋಜನೆ ಚಾಲ್ತಿಗೆ ಬಂದಾಗಿನಿಂದ ಯಾವೆಲ್ಲಾ ವಹಿವಾಟುಗಳಿಗೆ ಪಾನ್ಕಾರ್ಡ್ ಬೇಕು/ಬೇಡ ಎಂಬ ಗೊಂದಲಗಳು ಸಾರ್ವಜನಿಕರುನ್ನು ಕಾಡುತ್ತಲ್ಲೇ ಇದೆ.
ಆ ಗೊಂದಲಗಳಿಗೆ ಪರಿಹಾರ ಇಲ್ಲಿದ್ದು ಯಾವ ಎಲ್ಲಾ ನೋಂದವಣಿ ಪ್ರಕ್ರಿಯೆಗಳಿಗೆ ಪಾನ್ಕಾರ್ಡ್ ನಂಬರ್ನ್ನು ಲಿಂಕ್ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
– ಮೋಟಾರು ವಾಹನವನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಪಾನ್ಕಾರ್ಡ್ನ ಅವಶ್ಯವಿದೆ.
– ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಪಾನ್ಕಾರ್ಡ್ ಬೇಕಾಗುತ್ತದೆ.
– ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಪಡೆಯಲು ಅರ್ಜಿ ಸಲ್ಲಿಸುವಾಗ ಪಾನ್ಕಾರ್ಡ್ ನಂಬರ್ ಕಡ್ಡಾಯ.
– ಡಿಮ್ಯಾಟ್ ಖಾತೆ ತೆರೆಯಲು ಪಾನ್ಕಾರ್ಡ್ ಅತ್ಯವಶ್ಯಕ.
– ಹೋಟೆಲ್ ಅಥವಾ ರೆಸ್ಟೋರೆಂಟ್ಗಳ ಬಿಲ್ 50 ಸಾವಿರ ಗಡಿ ದಾಟಿದ್ದರೆ, ಬಿಲ್ ಮೊತ್ತವನ್ನು ಪಾವತಿಸಲು ಪಾನ್ಕಾರ್ಡ್ ಬೇಕಾಗುತ್ತದೆ.
– 50 ಸಾವಿರ ಮೀರಿ ವಿದೇಶಿ ಪ್ರಯಾಣ ಅಥವಾ ವಿದೇಶಿ ಕರೆನ್ಸಿಯನ್ನು ಖರೀದಿಸಲು ಪಾನ್ಕಾರ್ಡ್ನ ಅವಶ್ಯವಿದೆ.
– 50 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಮ್ಯೂಚುಯಲ್ ಫಂಡ್, ಡಿಬೆಂಚರ್ಗಳು ಹಾಗೂ ಬಾಂಡ್ಗಳ ಖರೀದಿ ಪ್ರಕ್ರಿಯೆಯಲ್ಲಿ ಪಾನ್ಕಾರ್ಡ್ ನಂಬರ್ ಅಗತ್ಯವಾಗುತ್ತದೆ.
– ಏಕಕಾಲಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದಾದರೆ ಪಾನ್ಕಾರ್ಡ್ನ ಅವಶ್ಯವಿದೆ.
– ನಿಮ್ಮ ಸ್ಥಿರ ಠೇವಣಿ(ಫಿಕ್ಸ್ಡ್ ಡೆಪಾಸಿಟಿ) ಒಂದೇ ವರ್ಷಕ್ಕೆ 50 ಸಾವಿರದ ಗಡಿ ದಾಟಿದ್ದರೆ ಅಥವಾ ಹಣಕಾಸು ವರ್ಷಗಳಲ್ಲಿ 5 ಲಕ್ಷದ ಮಿತಿ ಮೀರಿದ್ದರೆ ಪಾನ್ಕಾರ್ಡ್ ನಂಬರ್ ಲಿಂಕ್ ಮಾಡುವುದು ಅಗತ್ಯ.
– 50 ಸಾವಿರಕ್ಕಿಂತ ಹೆಚ್ಚು ಜೀವ ವಿಮೆ ಯೋಜನೆಯ ಕಾರ್ಯನಿರ್ವಹಣೆಗೆ ಪಾನ್ಕಾರ್ಡ್ ಬೇಕಾಗುತ್ತದೆ.
– ಸ್ಟಾಕ್ ಎಕ್ಸೇಚೆಂಜ್ ಪಟ್ಟಿಯಲ್ಲಿ ಮಾನ್ಯತೆ ಪಡೆದ ಕಂಪೆನಿಯ ಮಾಲೀಕರಿಂದ ಷೇರುಗಳನ್ನು ಖರೀದಿಸುವಾಗ ಅದರ ಮೊತ್ತ 1 ಲಕ್ಷ ಮೀರಿದ್ದರೆ ಪಾನ್ಕಾರ್ಡ್ ನಂಬರ್ ಅನ್ನು ನಮೂದಿಸುವುದು ಅಗತ್ಯ.
– ಸ್ಥಿರ ಆಸ್ತಿಯನ್ನು 10 ಲಕ್ಷ ಮೀರಿದ ಮೊತ್ತಕ್ಕೆ ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಅಥವಾ ಸ್ಟ್ಯಾಂಪ್ ಮೌಲ್ಯಮಾಪನ ಪ್ರಾಧಿಕಾರದ ಸೆಕ್ಷನ್ 50ಸಿ ಯ ಅನ್ವಯ 10 ಲಕ್ಷ ಮೀರಿದ ಮೌಲ್ಯಯುತವಾದ ಆಸ್ತಿಯ ಖರೀದಿಗೆ ಪಾನ್ಕಾರ್ಡ್ ಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!