8 ಸಾವಿರ ಕೋಟಿ ರೂ.ಗೆ ವಾರಸುದಾರರೇ ಇಲ್ಲ
Team Udayavani, Jan 14, 2018, 12:12 PM IST
ಹೊಸದಿಲ್ಲಿ: ದೇಶದಾದ್ಯಂತ ನಾನಾ ಬ್ಯಾಂಕು ಗಳಲ್ಲಿ ಅನಾಥವಾಗಿರುವ ಖಾತೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ಇಂಥ ಖಾತೆಗಳಲ್ಲಿ ಸುಮಾರು 8 ಸಾವಿರ ಕೋಟಿ ರೂ.ಹಣ ನಿರುಪ ಯುಕ್ತವಾಗಿ ಉಳಿದಿದೆಯೆಂದು ಆರ್ಬಿಐ ತಿಳಿಸಿದೆ.
2017ರ ಡಿ. 16ರವರೆಗಿನ ಮಾಹಿತಿಯಂತೆ ದೇಶದಲ್ಲಿ ಇಂಥ 2.63 ಕೋಟಿ ಬ್ಯಾಂಕ್ ಖಾತೆಗಳಿದ್ದು, ಇವುಗಳಲ್ಲಿ 8,864.6 ಕೋಟಿ ರೂ. ಹಣವಿದೆ. ಅನಾಮಧೇಯ ವ್ಯಕ್ತಿಗಳಿಂದ ಕೆಲ ಬ್ಯಾಂಕ್ಗಳ ಖಾತೆಗೆ ಹಣ ಜಮೆ ಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹಾಗೂ ಮೌಲ್ಯಗಳಲ್ಲೂ ಗಣನೀಯ ಹೆಚ್ಚಳವಾಗಿದೆ ಎಂದು ಆರ್ಬಿಐ ಹೇಳಿದೆ.
ನಾಲ್ಕು ವರ್ಷಗಳಲ್ಲಿ ಅಧಿಕ: 2012ರಲ್ಲಿ 1.32 ಕೋಟಿ ಖಾತೆಗಳಿಗೆ ಹೀಗೆ ಹಣ ಹರಿದುಬಂದಿದ್ದರೆ, 2016ರಲ್ಲಿ 2.63 ಕೋಟಿ ಖಾತೆಗಳಿಗೆ ಇಂಥ ಹಣ ಜಮೆಯಾಗಿದೆ. ಇದಲ್ಲದೆ, 2012ರಲ್ಲಿ 3,598 ಕೋಟಿ ರೂ.ಗಳಷ್ಟಿದ್ದ ಈ ಅನಾಥ ಧನ, 2016ರ ಹೊತ್ತಿಗೆ 8,864 ಕೋಟಿ ರೂ.ಗಳಿಗೆ ಬಂದು ಮುಟ್ಟಿದೆ. ಆದರೆ, ಈ ಹಣವನ್ನು ಪಡೆದುಕೊಳ್ಳಲು ಯಾರೂ ಬಂದಿಲ್ಲ ಎಂದಿದೆ ಆರ್ಬಿಐ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ