Land Dispute: ಒಂದೇ ಕುಟುಂಬದ ಮೂವರ ಗುಂಡಿಕ್ಕಿ ಹತ್ಯೆ… CCTVಯಲ್ಲಿ ಭಯಾನಕ ದೃಶ್ಯ ಸೆರೆ
Team Udayavani, Feb 3, 2024, 11:19 AM IST
ಲಕ್ನೋ: ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶುಕ್ರವಾರ ನಡೆದಿದೆ.
ಲಕ್ನೋದ ಮಹಿಲಾಬಾದ್ನ ಮೊಹಮ್ಮದ್ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮುನೀರ್ ಅಹ್ಮದ್ ಖಾನ್, ಆತನ ಸೋದರಳಿಯ ಹಂಝಲಾ ಖಾನ್ (17) ಮತ್ತು ಹಂಝಾಳ ತಾಯಿ ಫರ್ಹೀನ್ ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದ ಲಕ್ನೋ ಪೊಲೀಸ್ ಆಯುಕ್ತರು ಜಮೀನು ವಿವಾದಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಬಹಳ ದಿನಗಳಿಂದ ಜಗಳಗಳು ನಡೆಯುತ್ತಿತ್ತು. ಈ ವಿವಾದ ನ್ಯಾಯಾಲಯದಲ್ಲೂ ವಜಾ ಗೊಂಡಿತ್ತು ಇದರ ನಡುವೆ ಪೊಲೀಸರಿಗೆ ಮಾಹಿತಿ ನೀಡದೆ ಜಮೀನು ಅಳತೆ ಮಾಡಲು ಲೆಕ್ಕಾಧಿಕಾರಿಯನ್ನು ಕರೆಸಿ ಜಮೀನು ಅಳತೆ ಮಾಡುತ್ತಿದ್ದರು ಈ ವೇಳೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಕುಟುಂಬ ಸದಸ್ಯರು ಮನೆಗೆ ತೆರಳಿದ್ದಾರೆ ಅಲ್ಲಿಗೆ ಬಂದ ಒಂದು ಕುಟುಂಬ ಮತ್ತೆ ವಾಗ್ವಾದ ನಡೆಸಿದೆ ಇದು ಉಲ್ಬಣಗೊಂಡು ಸಿರಾಜ್ ಅಹ್ಮದ್ ಖಾನ್ ಅಲಿಯಾಸ್ ಲಲ್ಲನ್ ತನ್ನ ಪರವಾನಗಿ ಪಡೆದ ರೈಫಲ್ನಿಂದ ಮುನೀರ್, ಹಂಝಲಾ ಮತ್ತು ಫರ್ಹೀನ್ಗೆ ಗುಂಡು ಹಾರಿಸಿದ್ದಾನೆ.
ಅಲ್ಲದೆ ಲಲ್ಲನ್ ಎಂಬ ವ್ಯಕ್ತಿಯ ಮೇಲೆ ಈ ಹಿಂದೆಯೂ ಕ್ರಿಮಿನಲ್ ಕೇಸು ದಾಖಲಾಗಿತ್ತು ಆತನ ವಿರುದ್ಧ ಮಹಿಲಾಬಾದ್ನಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
लखनऊ : जमीन के विवाद में आपस में भिड़ा परिवार, 3 लोगों को सरेआम मारी गोली; CCTV में कैद
पढ़ें पूरी खबर : https://t.co/FuMxYNWKKp pic.twitter.com/rkfI1eD6W8
— NDTV India (@ndtvindia) February 2, 2024
ಇದನ್ನೂ ಓದಿ: 2012ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ… ಬಿಜೆಪಿ ಸಂಸದೆಗೆ 6 ತಿಂಗಳ ಜೈಲು ಶಿಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ