ಸುನಾಮಿ ಪತ್ರ: ಪಾಕ್ಗೆ ನಡುಕ
Team Udayavani, Nov 7, 2017, 6:25 AM IST
ಹೊಸದಿಲ್ಲಿ: ಸದ್ಯದಲ್ಲೇ ಸುನಾಮಿ ಅಪ್ಪಳಿಸಲಿದೆ ಎಂದು ಕೇರಳದ ವ್ಯಕ್ತಿಯೊಬ್ಬ ಪ್ರಧಾನಿ ಮೋದಿಗೆ ಇತ್ತೀಚೆಗೆ ಬರೆದಿದ್ದ ಪತ್ರವೊಂದು ಪಾಕಿಸ್ಥಾನ ಸರಕಾರದ ನಿದ್ದೆಗೆಡಿಸಿದ ಕುತೂಹಲದ ಪ್ರಕರಣ ಜರುಗಿದೆ.
ಕೇರಳದ ಬಿಕೆ ರಿಸರ್ಚ್ ಅಸೋಸಿಯೇಷನ್ನ ನಿರ್ದೇಶಕ ಎಂದು ಹೇಳಿಕೊಂಡ ಬಾಬು ಕಲಾಯಿಲ್ ಎಂಬ ವ್ಯಕ್ತಿಯೊಬ್ಬ ಸೆ.20ರಂದು ಮೋದಿಯವರಿಗೆ ಪತ್ರ ಬರೆದು, ಡಿ.31ರೊಳಗೆ ಹಿಂದೂ ಮಹಾಸಾಗರದಲ್ಲಿ ಮಹಾ ಭೂಕಂಪವೊಂದು ಸಂಭವಿಸಲಿದ್ದು, ಪರಿಣಾಮ ದೈತ್ಯ ಸುನಾಮಿ ಏಳಲಿದೆ. ಇದರ ದುಷ್ಪರಿಣಾಮ ಭಾರತ, ಪಾಕಿಸ್ಥಾನ, ಚೀನ ದೇಶಗಳ ಮೇಲೆ ಆಗಲಿದೆ. ಇದನ್ನು ತನ್ನಲ್ಲಿರುವ ಅತೀಂದ್ರಿಯ ಶಕ್ತಿಯಿಂದ ಆ.20ರಂದು ಕಂಡುಕೊಂಡಿದ್ದಾಗಿ ತಿಳಿಸಿದ್ದ.
ಈ ಪತ್ರವನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಇದು, ಗಡಿ ದಾಟಿ ಪಾಕಿಸ್ಥಾನಕ್ಕೂ ಹೋಗಿ,ಅಲ್ಲಿನ ಸರಕಾರ ಗಕ್ಕನೆ ಎದ್ದು ಕುಳಿತುಕೊಳ್ಳುವಂತೆ ಮಾಡಿದೆ. ಈ ಬಗ್ಗೆ ಮೊದಲು ಎಚ್ಚೆತ್ತುಕೊಂಡ ಪಾಕಿಸ್ತಾನದ ಐಎಸ್ಐ, ಪ್ರಧಾನಿ ಕಾರ್ಯಾಲಯದ ಅಧೀನದಲ್ಲಿರುವ ಇಆರ್ಆರ್ಎನ ಉಪಾಧ್ಯಕ್ಷರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದರನ್ವಯ, ನ.1ರಂದು ಉಪಾಧ್ಯಕ್ಷರು ತಮ್ಮ ಅಧೀನ ಅಧಿಕಾರಿಗಳಿಗೆ ತುರ್ತು ಸಂದೇಶ ರವಾನಿಸಿ, ಮುನ್ನೆಚ್ಚರಿಕಾ ಕ್ರಮ ಜರಗಿಸಲು ಸೂಚಿಸಿದ್ದಾರೆ.
ತನ್ನ ಹಾಗೂ ತನ್ನ ಆಪ್ತ ಮಿತ್ರ ಚೀನಕ್ಕೂ ಗಂಡಾಂತರ ಕಾದಿದೆ ಎಂದು ಪಾಕಿಸ್ಥಾನ ಕಂಗಾಲಾಯಿತೋ ಏನೋ! ಆದರೂ, ಪತ್ರ ಬರೆದ ಬಾಬು ಯಾವ ಮಟ್ಟದ ತಲ್ಲಣ ನಿರೀಕ್ಷಿಸಿದ್ದರೋ ಆ ತಲ್ಲಣ ನೆರೆಯ ದೇಶದಲ್ಲಿ ಉಂಟಾಗಿರುವುದು ವಿಪರ್ಯಾಸ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್