ಉದಯ್ಪುರ: ಟೈಲರ್ ಕನ್ಹಯ್ಯ ಲಾಲ್ ಹತ್ಯೆ: ತೆರೆಯದ ಮಾರ್ಕೆಟ್
Team Udayavani, Jul 22, 2022, 9:51 PM IST
ಜೈಪುರ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಘಟನೆಗೆ ಸರಿಸುಮಾರು 1 ತಿಂಗಳು ಕಳೆದಿದೆ. ಆದರೂ ಇನ್ನೂ ಕೊಲೆ ನಡೆದ ಸ್ಥಳದಲ್ಲಿ ಮಾತ್ರ ಸೂತಕ ಛಾಯೆ ಮುಂದುವರಿದಿದೆ.
ಕೊಲೆಯಾದ ಸ್ಥಳವಾದ ಮಾಲದಾಸ ಸ್ಟ್ರೀಟ್ ಜನಜಂಗುಳಿಯಿಂದ ಕೂಡಿರುತ್ತಿದ್ದ ಸ್ಥಳವಾಗಿತ್ತು. ಆದರೆ ಜೂ.28ರವರೆಗೆ ಕೊಲೆಯಾದ ನಂತರ ಅಲ್ಲಿಗೆ ಜನರು ತೆರಳುತ್ತಿಲ್ಲ.
ಸ್ಟ್ರೀಟ್ನಲ್ಲಿ 15 ಅಂಗಡಿಗಳಿದ್ದು, ಅದರಲ್ಲಿ 13 ಅಂಗಡಿಗಳು ಇನ್ನೂ ಬಾಗಿಲು ತೆರೆಯುತ್ತಿಲ್ಲ ಎಂದು ವರದಿಗಳು ತಿಳಿಸಿವೆ.