ಅನಧಿಕೃತ ಗೈರಾದವರು ವಜಾ
Team Udayavani, Feb 11, 2018, 8:15 AM IST
ಹೊಸದಿಲ್ಲಿ: ಅನಧಿಕೃತ ರಜೆಯ ಮೇಲೆ ತೆರಳಿರುವ ಸುಮಾರು 13 ಸಾವಿರ ಸಿಬ್ಬಂದಿ ಯನ್ನು ಸೇವೆಯಿಂದ ವಜಾಗೊಳಿಸಲು ರೈಲ್ವೆ ಇಲಾಖೆ ಯೋಚಿಸಿದೆ. ಇಲಾಖೆಯ ಆಡಳಿತ ಸುಧಾರಣೆ, ಸಿಬ್ಬಂದಿಯ ನೈತಿಕತೆ ಹೆಚ್ಚಳಕ್ಕೆ ಕ್ರಮ ಮುಂತಾದ ಯೋಜನೆಗಳನ್ನು ಹಾಕಿ ಕೊಳ್ಳಲಾಗಿದ್ದು, ಅದರ ಒಂದು ಭಾಗವಾಗಿ, ಅನಧಿಕೃತ ರಜೆ ಹಾಕಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಸದ್ಯಕ್ಕೆ ಇಲಾಖೆಯಲ್ಲಿ 13 ಲಕ್ಷ ನೌಕರರು ಇದ್ದು, ಇವರಲ್ಲಿ 13 ಸಾವಿರ ನೌಕರರು ದೀರ್ಘಕಾಲದಿಂದ ಸತತವಾಗಿ ಗೈರಾಗಿದ್ದಾರೆ. ಇಂಥ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇಲಾಖೆ ಹೇಳಿದೆ.
ನೈತಿಕತೆ ಹೆಚ್ಚಿಸಲು ಸಲಹೆ: ರೈಲ್ವೆ ಸಿಬ್ಬಂದಿಯ ನೈತಿಕತೆ ಹಾಗೂ ಕರ್ತವ್ಯಪರತೆ ಗಳನ್ನು ಹೆಚ್ಚಿಸಲು, ನೂತನ ವೇತನ ಪರಿಷ್ಕರಣೆ ವ್ಯವಸ್ಥೆ, ಬೋನಸ್, ಪ್ರೋತ್ಸಾಹ ಧನ ಹಾಗೂ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಗೌರವ ಪದಕ ನೀಡುವಂಥ ಕ್ರಮಗಳನ್ನು ಜಾರಿಗೆ ತರುವಂತೆ ರೈಲ್ವೆ ಸಮಿತಿ ಶಿಫಾರಸು ಮಾಡಿದೆ. ನೌಕರರ ತಂದೆ- ತಾಯಿಗೆ ರೈಲುಗಳಲ್ಲಿ ಉಚಿತ ಪ್ರಯಾಣ, ರೈಲು ಮಾರ್ಗಗಳನ್ನು 10 ವರ್ಷಗಳವರೆಗೆ ಅಪಘಾತ ಮುಕ್ತವಾಗಿ ನಿರ್ವಹಿಸಿದ ಟ್ರಾಕ್ ಮನ್, ಗ್ಯಾಂಗ್ಮನ್ಗಳ ಗುಂಪುಗಳಿಗೆ ನಗದು ಪುರಸ್ಕಾರ ನೀಡುವುದು ಸೇರಿ ಇನ್ನಿತರ ಶಿಫಾರಸು ನೀಡಲಾಗಿದೆ.
13 ಲಕ್ಷ ಇಲಾಖೆಯಲ್ಲಿರುವ ಒಟ್ಟು ನೌಕರರು
13 ಸಾವಿರ ಸತತವಾಗಿ ಗೈರಾಗಿರುವ ನೌಕರರು
ದೀರ್ಘಾವಧಿ ಗೈರು ಸಿಬ್ಬಂದಿ ವಜಾಕ್ಕೆ ಆದೇಶ
ಸಿಬ್ಬಂದಿ ಕರ್ತವ್ಯ ಪರತೆ ಹೆಚ್ಚಿಸಲು ಕ್ರಮಕ್ಕೆ ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು