ದುರ್ಬೀನಿಟ್ಟು ಮತಯಂತ್ರ ಕಾದವ ಸೋತ!
Team Udayavani, Mar 12, 2022, 7:45 AM IST
ಲಕ್ನೋ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗಳನ್ನು ಸ್ಥಳಾಂತರ ಮಾಡುವಾಗ ಮೋಸವಾಗಿದೆ ಎಂದು ದೂರುಗಳು ಕೇಳಿಬಂದಿದ್ದವು. ಅದೇ ನಿಟ್ಟಿನಲ್ಲಿ ದುರ್ಬೀನಿಟ್ಟುಕೊಂಡು ಇವಿಎಂ ಕಾದಿದ್ದ ಸಮಾಜವಾದಿ ಪಕ್ಷದ ಅಭ್ಯರ್ಥಿ ಚುನಾವಣಾ ಫಲಿತಾಂಶದಲ್ಲಿ ಸೋತಿದ್ದಾರೆ.
ಮೀರತ್ ಜಿಲ್ಲೆಯ ಹಸ್ತಿನಾಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ವತಿಯಿಂದ ಯೋಗೇಶ್ ವರ್ಮಾ ಚುನಾವಣೆಗೆ ನಿಂತಿದ್ದರು.
ಮತದಾನವಾದ ದಿನದಂದು ಅವರು, ಇವಿಎಂಗಳನ್ನು ಸ್ಥಳಾಂತರ ಮಾಡುವಾಗ ದೂರದಲ್ಲಿ ನಿಂತು ದುರ್ಬೀನಿಟ್ಟು ಗಮನಿಸುತ್ತಿದ್ದರು. ಆ ವಿಚಾರ ಸಾಕಷ್ಟು ಸುದ್ದಿಯಾಗಿತ್ತು ಕೂಡ. ಅಷ್ಟೊಂದು ಎಚ್ಚರಿಕೆ ವಹಿಸಿದರೂ ಅವರು ಚುನಾವಣೆಯಲ್ಲಿ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ವರ್ಮಾ ಅವರನ್ನು 7,312 ಮತಗಳಿಂದ ಸೋಲಿಸಿದ್ದಾರೆ. ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮಾಡೆಲ್ ಅರ್ಚನಾ ಗುಪ್ತಾ ಕೇವಲ 1,519 ಮತ ಪಡೆದು ಹೀನಾಯ ಸೋಲುಂಡಿದ್ದಾರೆ. ಬಿಎಸ್ಪಿ ವತಿಯಿಂದ ಸ್ಪರ್ಧಿಸಿದ್ದ ವ್ಯಕ್ತಿ 14,240 ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.