ತಾಯಿಯ ಅಂತ್ಯಕ್ರಿಯೆಗೆ ಹಣವಿಲ್ಲದ ಕಾರಣ ಮನೆಯಲ್ಲೇ ದೇಹವನ್ನು ಅಡಗಿಸಿಟ್ಟ ಮಗ.!
Team Udayavani, Dec 14, 2022, 8:56 AM IST
ಉತ್ತರ ಪ್ರದೇಶ: ತನ್ನ ತಾಯಿಯ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಮಗನೊಬ್ಬ ಮೃತದೇಹವನ್ನು ಮನೆಯಲ್ಲೇ ಅಡಗಿಸಿಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಗುಲ್ರಿಹಾ ಪ್ರದೇಶದಲ್ಲಿ ನಡೆದಿರುವುದು ಮಂಗಳವಾರ (ಡಿ.13 ರಂದು) ಬೆಳಕಿಗೆ ಬಂದಿದೆ.
ನಿವೃತ್ತ ಶಿಕ್ಷಕಿಯಾಗಿದ್ದ ಶಾಂತಿ ದೇವಿ (82) ಶಿವಪುರ-ಶಹಬಾಜ್ಗಂಜ್ ನಲ್ಲಿರುವ ತಮ್ಮ ತಾಯಿ ಮನೆಯಲ್ಲಿ ಮಗ ನಿಖಿಲ್ ಮಿಶ್ರಾನೊಂದಿಗೆ ವಾಸಿಸುತ್ತಿದ್ದರು. ನಿಖಿಲ್ ಮಾನಸಿಕ ಅಸ್ವಸ್ಥ ಹಾಗೂ ಕುಡುಕನಾಗಿದ್ದ. ತನ್ನ ತಾಯಿ ನಿಧನರಾಗಿದ್ದಾರೆ. ಆದರೆ ಆತನಿಗೆ ಮುಂದೆ ಏನು ಮಾಡುವುದೆಂದು ತಿಳಿಯದೇ, ಅತ್ತ ಹಣವೂ ಇಲ್ಲದೆ ನಿಧನರಾದ ತಾಯಿಯ ಜೊತೆಯೇ ನಾಲ್ಕೈದು ದಿನ ಕಳೆದಿದ್ದಾನೆ. ಸ್ಥಳೀಯರು ವಾಸನೆ ಬರುತ್ತಿರುವ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ನೋಡಿದಾಗ ಶಾಂತಿ ದೇವಿ ಸಾವನ್ನಪ್ಪಿ ಆದಾಗಲೇ ನಾಲ್ಕೈದು ದಿನ ಕಳೆದ ಕಾರಣ ಮನೆಯಿಂದ ವಾಸನೆ ಬರುತ್ತಿತ್ತು. ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ಮಗ ನಿಖಿಲ್ ಮಿಶ್ರಾ ಏನು ಮಾಡದೇ ಮನೆಯಲ್ಲಿ ಅದನ್ನು ಸಾಧ್ಯವಾದ್ದಷ್ಟು ಅಡಗಿಸಿ ಇಡಲು ನೋಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶಾಂತಿ ದೇವಿ ಏಕೈಕ ಮಗ ಹಾಗೂ ಗಂಡ ಮಿಶ್ರಾ ಅವರು ಮೊದಲು ಜೊತೆಯಲ್ಲಿಯೇ ವಾಸಿಸುತ್ತಿದ್ದರು. ಆದರೆ ಆ ಬಳಿಕ ಸಂಸಾರದಲ್ಲಿ ಕಲಹ ಉಂಟಾಗಿ ಶಾಂತಿ ದೇವಿ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸಿಸಲು ಆರಂಭಿದ್ದರು ಎಂದು ವರದಿ ತಿಳಿಸಿದೆ.
ಪೋಸ್ಟ್ ಮಾರ್ಟಂಗೆ ದೇಹವನ್ನು ಕಳುಹಿಸಲಾಗಿದ್ದು,ಅವರು ಹೇಗೆ ನಿಧನರಾದರು. ಏನಾಗಿತ್ತು ಮುಂತಾದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ