ರವಿದಾಸ ಜಯಂತಿಯಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು
Team Udayavani, Feb 1, 2018, 5:38 PM IST
ಮೌ, ಉತ್ತರ ಪ್ರದೇಶ : ಇಲ್ಲಿನ ರಾಣಿಪುರ ಪ್ರದೇಶದಲ್ಲಿನ ಗೋಕುಲಪುರ ಗ್ರಾಮದಲ್ಲಿ ರವಿದಾಸ ಜಯಂತಿಯಂದು ಎರಡು ಗುಂಪುಗಳ ನಡುವೆ ನಡೆದ ಕಾಳಗದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಕೊಲ್ಲಲ್ಪಟ್ಟು ಇತರ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.
ನಿನ್ನೆ ಬುಧವಾರ ರಾತ್ರಿ ಈ ಘಟನೆ ನಡೆಯಿತು. ಇಬ್ಬರು ಯುವಕರು ಕುಡಿದ ಅಮಲಿನಲ್ಲಿ ಮೆರವಣಿಗೆಯಲ್ಲಿನ ನೃತ್ಯವನ್ನು ನಿಲ್ಲಿಸುವಂತೆ ಹೇಳಿದರು. ಇದರ ಪರಿಣಾಮವಾಗಿ ಎರಡು ಗುಂಪುಗಳ ನಡುವೆ ಕಾಳಗ ಉಂಟಾಯಿತು.
ಈ ಘರ್ಷಣೆಯಲ್ಲಿ ಮೃತಪಟ್ಟವರನ್ನು ರಾಕೇಶ್ 22 ಮತ್ತು ದೇವಂತಿ 50 ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಗಳ ಮಾಡಿಕೊಂಡ ಎರಡೂ ಬಣಗಳು ಎಫ್ಐಆರ್ ದಾಖಲಿಸಿವೆ. ಪ್ರಕರಣವು ತನಿಖೆಯಲ್ಲಿದೆ ಎಂದು ಸರ್ಕಲ್ ಆಫೀಸರ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.