ಕಪ್ಪುಹಣದ ವಿರುದ್ಧ ಹೋರಾಡಿ: ಪ್ರಧಾನಿ ಕರೆ
Team Udayavani, Mar 27, 2017, 3:45 AM IST
ನವದೆಹಲಿ: ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಭಾಗಿಗಳಾಗಿ, ಈ ಹೋರಾಟವನ್ನು “ಮುಂದಿನ ಹಂತ’ಕ್ಕೆ ಕೊಂಡೊಯ್ಯುವಂತೆ ಪ್ರಧಾನಿ ನರೇಂದ್ರ ಮೋದಿ, ದೇಶವಾಸಿಗಳನ್ನು ಕೋರಿದ್ದಾರೆ.
ತಮ್ಮ ಮಾಸಿಕ “ಮನ್ ಕಿ ಬಾತ್’ ಕಾರ್ಯಕ್ರಮದ ವೇಳೆ ಈ ಮನವಿ ಮಾಡಿದ ಪ್ರಧಾನಿ, ಜನಸಾಮಾನ್ಯರು ತಮ್ಮ ನಿತ್ಯದ ಖರ್ಚುಗಳಿಗೆ ನಗದು ಬದಲಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವ ಮೂಲಕ ಕಪ್ಪು ಹಣ ತಡೆಗೆ ಸಹಕರಿಸುವಂತೆ ಕೋರಿದ್ದಾರೆ.
ಹಾಗೇ “”ದೇಶದ 125 ಕೋಟಿ ಭಾರತೀಯರು ಪ್ರತಿಜ್ಞೆ ಮಾಡಿದರೆ “ನವ ಭಾರತ’ ನಿರ್ಮಾಣ ಸುಲಭ ಸಾಧ್ಯವಾಗಲಿದೆ,” ಎಂದಿದ್ದಾರೆ. “”ಪ್ರಸಕ್ತ ವರ್ಷ 2500 ಕೋಟಿ ರೂ. ಡಿಜಿಟಲ್ ಪಾವತಿ ನಡೆಯುವ ನಿರೀಕ್ಷೆಯಿದೆ. ಆದರೆ ನೀವೆಲ್ಲರೂ ಮನಸು ಮಾಡಿದರೆ ಈ ಗುರಿಯನ್ನು ಕೇವಲ 6 ತಿಂಗಳಲ್ಲಿ ತಲುಪಬಹುದು. ಈ ನಿಟ್ಟಿನಲ್ಲಿ ಶಾಲೆ ಶುಲ್ಕ ಪಾವತಿ, ಔಷಧ, ದಿನಸಿ, ತರಕಾರಿ ಖರೀದಿ, ವಿಮಾನ ಹಾಗೂ ರೈಲು ಟಿಕೆಟ್ ಕಾಯ್ದಿರಿಸುವಿಕೆ ಸೇರಿದಂತೆ ನಮ್ಮ ನಿತ್ಯದ ವ್ಯವಹಾರಗಳ ವೇಳೆ ಡಿಜಿಟಲ್ ಪಾವತಿ ಮಾಡಬೇಕಿದೆ,” ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್