ಕೊನೆಯ ಕ್ಷಣದಲ್ಲಿ ಪಲ್ಟಿಹೊಡೆದು ಸಾಗಿದ್ದ ವಿಕ್ರಮ್‌ ಲ್ಯಾಂಡರ್‌


Team Udayavani, Sep 14, 2019, 5:50 AM IST

vikram-lander

ಹೊಸದಿಲ್ಲಿ: ಜಗತ್ತೇ ಎದುರು ನೋಡುತ್ತಿದ್ದ ಚಂದ್ರಯಾನ 2 ಸೆ. 7 ರಂದು ಚಂದ್ರನ ಮೇಲೆ ಇಳಿಯುವಾಗ ಸಂವಹನ ಕಡಿದುಕೊಂಡ ಡೇಟಾ ಅಧ್ಯಯನ ನಡೆಸಲಾಗಿದ್ದು, ಕೊನೆಯ ಕ್ಷಣದಲ್ಲಿ ಪಲ್ಟಿಹೊಡೆದು ಚಲಿಸಿದ್ದರಿಂದಲೇ ಸಮಸ್ಯೆ ಉಂಟಾಗಿರುವುದು ತಿಳಿದುಬಂದಿದೆ. ಈ ಬಗ್ಗೆ “ಇಂಡಿಯಾ ಟುಡೇ’ ವರದಿ ಮಾಡಿದ್ದು, ವಿಕ್ರಮ್‌ ಲ್ಯಾಂಡರ್‌ ಇಳಿಯುವ ಪ್ರಕ್ರಿಯೆ ಒಟ್ಟು 15 ನಿಮಿಷಗಳದ್ದಾಗಿದ್ದು, ಮೊದಲ 11 ನಿಮಿಷ ದವರೆಗೂ ಸರಿಯಾಗಿಯೇ ಕಾರ್ಯನಿರ್ವಹಣೆ ಮಾಡುತ್ತಿತ್ತು ಎಂದು ವರದಿ ಮಾಡಿದೆ. ಆದರೆ ಸುಮಾರು 11 ನಿಮಿಷದ ಹೊತ್ತಿಗೆ ಇಳಿಯುವಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ವಿಕ್ರಮ್‌ ಲ್ಯಾಂಡರ್‌ ಸ್ವಲ್ಪ ಮಟ್ಟಿಗೆ ಚಂದ್ರನ ಮೇಲ್ಮೆ„ಕಡೆಗೆ ಬಾಗಬೇಕಿತ್ತು. ಹೀಗೆ ಬಾಗಿದರೆ ವಿಕ್ರಮ್‌ನ ತಲೆಮೇಲಿರುವ ಕ್ಯಾಮೆರಾದಿಂದ ಇಳಿಯಬೇಕಿರುವ ಸ್ಥಳವನ್ನು ಇಸ್ರೋ ವಿಜ್ಞಾನಿಗಳು ಗ್ರಹಿಸಲು ಸಾಧ್ಯವಾಗುತ್ತಿತ್ತು. ಈ ಅತ್ಯಂತ ಸಂಕೀರ್ಣ ಚಲನೆಯೇ ವಿಕ್ರಮ್‌ಗೆ ಮುಳುವಾಗಿದೆ. ಸ್ವಲ್ಪ ಬಾಗಬೇಕಿದ್ದ ವಿಕ್ರಮ್‌ ಈ ಸಮಯದಲ್ಲಿ ಸಂಪೂರ್ಣ ತಲೆಕೆಳಗಾಗಿದೆ.

ಹೀಗೆ ತಲೆಕೆಳಗಾಗುತ್ತಿದ್ದಂತೆ ವಿಕ್ರಮ್‌ನ ಕೆಳಭಾಗದಲ್ಲಿದ್ದ ವೇಗ ನಿಯಂತ್ರಕ ಇಂಜಿನ್‌ಗಳು ಮೇಲ್ಮುಖವಾಗಿವೆ. ಹೀಗಾಗಿ ಲ್ಯಾಂಡರ್‌ ಅನ್ನು ನಿಧಾನವಾಗಿಸುವುದರ ಬದಲಿಗೆ ಈ ಇಂಜಿನ್‌ಗಳು ವಿಕ್ರಮ್‌ ಅನ್ನು ವೇಗಗೊಳಿಸಿ, ಚಂದ್ರನ ಮೇಲ್ಮೆ„ಯತ್ತ ವೇಗವಾಗಿ ನೂಕಿವೆ. 11 ನಿಮಿಷ 28 ಸೆಕೆಂಡಿನಲ್ಲಿ ವಿಕ್ರಮ್‌ನ ವೇಗ ಪ್ರತಿ ಸೆಕೆಂಡಿಗೆ 42.9 ಮೀಟರ್‌ ಇತ್ತು. ಆದರೆ ಒಂದೂವರೆ ನಿಮಿಷದ ಅನಂತರ ಇದರ ವೇಗ ಹೆಚ್ಚಳಗೊಂಡು, ಪ್ರತಿ ಸೆಕೆಂಡಿಗೆ 58.9 ಮೀಟರ್‌ ಆಗಿದೆ. ಹಾಗೆ ವೇಗ ಹೆಚ್ಚಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ವಿಕ್ರಮ್‌ ಸಂಪರ್ಕವನ್ನೂ ಕಡಿದುಕೊಂಡಿದೆ. ಆಗ ಸಂಪರ್ಕ ಕಡಿದುಕೊಂಡ ಅನಂತರ, ಈವರೆಗೂ ಇಸ್ರೋ ಸಂಪರ್ಕಕ್ಕೆ ವಿಕ್ರಮ್‌ ಸಿಕ್ಕಿಲ್ಲ. ಅನಂತರ ಆರ್ಬಿಟರ್‌ ಸಹಾಯದಿಂದ ವಿಕ್ರಮ್‌ ಇರುವ ಸ್ಥಳವನ್ನು ಗರುತಿಸಲಾಗಿದೆಯಾದರೂ, ಅದರೊಂದಿಗೆ ಸಂವಹನ ನಡೆಸುವ ಈವರೆಗಿನ ಎಲ್ಲ ಪ್ರಯತ್ನಗಳೂ ವಿಫ‌ಲವಾಗಿವೆ.

ಕೆಲವೇ ದಿನಗಳು ಬಾಕಿ: ವಿಕ್ರಮ್‌ ಲ್ಯಾಂಡರ್‌ ಜತೆ ಸಂಪರ್ಕ ಸಾಧಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹದಿನಾಲ್ಕು ದಿನಗಳವರೆಗೆ ಅಂದರೆ ಚಂದ್ರನಲ್ಲಿ ಒಂದು ದಿನಕ್ಕೆ ಸಾಕಾಗುವಷ್ಟು ವಿದ್ಯುತ್ತು ಬ್ಯಾಟರಿಯಲ್ಲಿ ಇದೆ. ಅಂದರೆ ಈಗಾಗಲೇ ಒಂದು ವಾರದಿಂದ ಚಂದ್ರನ ಮೇಲೆ ಇರುವ ವಿಕ್ರಮ್‌ ಲ್ಯಾಂಡರ್‌ ಜತೆ ಸಂವಹನ ನಡೆಸುವ ಅವಕಾಶ ಇನ್ನೊಂದು ವಾರಗಳವರೆಗೆ ಮಾತ್ರ ಇರಲಿದೆ. ಸೆ. 21 ರ ಅನಂತರ ವಿಕ್ರಮ್‌ ಲ್ಯಾಂಡರ್‌ ಇರುವ ಭಾಗದಲ್ಲಿ ಕತ್ತಲು ಆವರಿಸುವುದರಿಂದ ಯಾವುದೇ ರೀತಿಯ ಸಂವಹನ ನಡೆಸುವುದೂ ಕಷ್ಟಕರವಾಗಲಿದೆ. ಅಲ್ಲಿಯ ವರೆಗೂ ಲ್ಯಾಂಡರ್‌ ಜತೆ ಸಂವಹನ ನಡೆಸುವ ಪ್ರಯತ್ನ ನಡೆಸಲಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿ ದ್ದಾರೆ. ಈ ಮಧ್ಯೆ ನಾಸಾ ಕೂಡ ವಿಕ್ರಮ್‌ ಜೊತೆಗೆ ಸಂಪರ್ಕ ಸಾಧಿಸುವ ಯತ್ನ ನಡೆಸಿದೆ.

ತನ್ನ ಡೀಪ್‌ ಸ್ಪೇಸ್‌ ನೆಟ್‌ವರ್ಕ್‌ನಿಂದ ಸಂಕೇತಗಳನ್ನು ವಿಕ್ರಮ್‌ ಕಡೆಗೆ ಕಳುಹಿಸಿದೆಯಾದರೂ ಯಾವುದೇ ಸಂವಹನ ಸಾಧ್ಯವಾಗಲಿಲ್ಲ. ನಾಸಾದ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಅರ್ರೆ ಉಪಕರಣ ವಿಕ್ರಮ್‌ನಲ್ಲಿದ್ದು, ಇದಕ್ಕೆ ಸಂವಹನ ಕಳುಹಿಸಲಾಗುತ್ತಿದೆ.

ಟಾಪ್ ನ್ಯೂಸ್

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.