ವಾಯು ಮಾರ್ಗ ನಿಯಮ ಉಲ್ಲಂಘನೆ: ಜಾರ್ಜಿಯಾ ವಿಮಾನವನ್ನು ಬಲವಂತವಾಗಿ ಇಳಿಸಿದ IAF
Team Udayavani, May 10, 2019, 7:05 PM IST
ಜೈಪುರ : ಪಾಕಿಸ್ಥಾನದ ವಾಯು ಪ್ರದೇಶದಿಂದ ಬಂದ, ಭಾರೀ ಸರಕು ತುಂಬಿದ ಜಾರ್ಜಿಯಾ ವಿಮಾನವನ್ನು ವಾಯು ಮಾರ್ಗ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ ಭಾರತೀಯ ವಾಯು ಪಡೆಯ (ಐಎಎಫ್) ಫೈಟರ್ ಜೆಟ್ಗಳು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವೆಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ಕರಾಚಿಯಿಂದ ದಿಲ್ಲಿಗೆ ಹೋಗಲಿದ್ದ ಆಂತೋನೋವ್ ಎಎನ್-12 ಜಾರ್ಜಿಯಾ ವಿಮಾನ ತನ್ನ ನಿಗದಿತ ಹಾರಾಟ ಮಾರ್ಗದಿಂದ ವಿಮುಖವಾಗಿ ಉತ್ತರ ಗುಜರಾತ್ನ ಅನಿರ್ಧರಿತ ಪ್ರದೇಶದಿಂದ ಭಾರತೀಯ ವಾಯು ವಲಯವನ್ನು ಪ್ರವೇಶಿಸಿತು ಎಂದು ವರದಿಗಳು ತಿಳಿಸಿವೆ.
ದೇಶದ ವಾಯು ಗಡಿಯಲ್ಲಿ ಅತ್ಯಂತ ಕಟ್ಟೆಚ್ಚರದಿಂದಿದ್ದ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಗಳು ಆ ಸಂದರ್ಭದಲ್ಲಿ ತತ್ಕ್ಷಣ ಕಾರ್ಯೋನ್ಮುಖವಾಗಿ ಜಾರ್ಜಿಯಾ ಸರಕು ಸಾಗಣೆ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದವು.
ಜಾರ್ಜಿಯಾ ಸರಕು ವಿಮಾನ ತನ್ನ ವೇಳಾ ಪಟ್ಟಿಗೆ ಅನುಗುಣವಾಗಿ ಹಾರಾಟ ಕೈಗೊಂಡಿತ್ತಾದರೂ ಅದರ ವಾಯು ಮಾರ್ಗ ತಪ್ಪಾಗಿತ್ತು. ಇದೀಗ ಜಾರ್ಜಿಯಾ ವಿಮಾನದ ಪೈಲಟ್ನನ್ನು ಪ್ರಶ್ನಿಸಲಾಗುತ್ತಿದ್ದು ವಿಮಾನವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತಿದೆ. ಪೊಲೀಸರು ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದಿದ್ದು ಸಿಐಎಸ್ಎಫ್ ಅಧಿಕಾರಿಗಳು ಜಾರ್ಜಿಯಾ ವಿಮಾನದ ಪೈಲಟ್ ನನ್ನು ಪ್ರಶ್ನಿಸುತ್ತಿದ್ದಾರೆ.
ಜಾರ್ಜಿಯಾ ವಿಮಾನವನ್ನು ಜೈಪುರದಲ್ಲಿ ಬಲವಂತವಾಗಿ ಇಳಿಸುವಲ್ಲಿ ಎರಡು ಸುಖೋಯ್ ಫೈಟರ್ಗಳು ಬೆಂಗಾವಲಿಗೆ ಇದ್ದವು.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ