ತಿಮ್ಮಪ್ಪನಿಗೂ ವನ್ನಾಕ್ರೈ ಕಾಟ
Team Udayavani, May 18, 2017, 1:49 PM IST
ತಿರುಮಲ: ಜಗತ್ತಿನಾದ್ಯಂತ ಉದ್ಯಮಗಳ, ಜನರ ನಿದ್ದೆಗೆಡಿಸಿರುವ ರ್ಯಾನ್ಸಮ್ವೇರ್ ವೈರಸ್ ದಾಳಿ ಕಾಟ ತಿರುಪತಿಯ ತಿಮ್ಮಪ್ಪನನ್ನೂ ಬಿಟ್ಟಿಲ್ಲ.
ತಿರುಪತಿ ದೇಗುಲದ ಆಡಳಿತ ಮಂಡಳಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ 10 ಕಂಪ್ಯೂಟರ್ಗಳ ಮೇಲೆ ಹ್ಯಾಕರ್ಗಳು ರ್ಯಾನ್ಸಮ್ವೇರ್ ದಾಳಿ ನಡೆಸಿದ್ದಾರೆ. ಪರಿಣಾಮ ಸಿಬಂದಿವರ್ಗ ದಾಳಿಯ ಭೀತಿಯಿಂದಾಗಿ ಹೆಚ್ಚುವರಿಯಾಗಿ 20 ಕಂಪ್ಯೂಟರ್ಗಳಲ್ಲಿ ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.
ಇದೆಲ್ಲ ಆಡಳಿತ ಕೆಲಸಕ್ಕಾಗಿ ಬಳಸುತ್ತಿರುವ ಕಂಪ್ಯೂಟರ್ಗಳಾಗಿವೆ. ಟಿಕೆಟ್ ನೀಡುವುದು, ಭಕ್ತಾದಿಗಳ ಸೇವೆ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸುವ ಕಂಪ್ಯೂಟರ್ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ವೈರಸ್ ದಾಳಿ ಹಿನ್ನೆಲೆಯಲ್ಲಿ ಟಿಟಿಡಿ ಐಟಿ ವಿಭಾಗ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ನೊಂದಿಗೆ ಸಂಪರ್ಕದಲ್ಲಿದೆ. ದಾಳಿಗೊಳಗಾದ ಕಂಪ್ಯೂಟರ್ಗಳು ಹಳೆ ಆಪರೇಟಿಂಗ್ ಸಿಸ್ಟಂ ಹೊಂದಿದ್ದವು ಎಂದು ಟಿಟಿಡಿ ಹೇಳಿದೆ.
ಆಸ್ಪತ್ರೆ ಮೇಲೂ ದಾಳಿ: ಇನ್ನೊಂದೆಡೆ, ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ಬರ್ಹಾಂಪುರ ಸರಕಾರಿ ಆಸ್ಪತ್ರೆಯ ಡಾಟಾ ವ್ಯವಸ್ಥೆಯ ಮೇಲೂ ವನ್ನಾಕ್ರೈ ರ್ಯಾನ್ಸಮ್ವೇರ್ ವೈರಸ್ ಅಟ್ಯಾಕ್ ಆಗಿದೆ. ಇಲ್ಲಿನ ಸಿಸ್ಟಂಗಳು ಏಕಾಏಕಿ ಕೆಟ್ಟುಹೋಗಿದ್ದು, 300 ಡಾಲರ್ಗಳನ್ನು ನೀಡಿದರೆ ಮಾತ್ರ ಸಿಸ್ಟಂಗಳನ್ನು ಸರಿಪಡಿಸುತ್ತೇವೆ ಎಂಬ ಸಂದೇಶಗಳು ಬರತೊಡಗಿವೆ. ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ)ದ ತಜ್ಞರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿ ಸರೋಜ್ ಮಿಶ್ರಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ
Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ
CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ
Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ
MUST WATCH
ಹೊಸ ಸೇರ್ಪಡೆ
National Conference ರೋಡ್ ಶೋ ವೇಳೆ ಮೂವರಿಗೆ ಚಾಕು ಇರಿತ
ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ
Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್ ಲಾರಿ; ಟ್ರಾಫಿಕ್ ಜಾಮ್
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ