ಪತ್ರಿಕೋದ್ಯಮದ ಮುಂದಿನ ಬೆಳವಣಿಗೆ ಅಗತ್ಯ: ಸಚಿವ ರಾಜೀವ್ ಚಂದ್ರಶೇಖರ್
ನ್ಯಾಯ ಸಮ್ಮತ ಆದಾಯ ಹಂಚಿಕೆ ಇರಲಿ
Team Udayavani, Jan 21, 2023, 7:45 PM IST
ನವದೆಹಲಿ: ದೊಡ್ಡ ತಂತ್ರಜ್ಞಾನ ಕಂಪನಿಗಳು ಮಾಹಿತಿಯನ್ನು ತಮ್ಮ ಸರ್ಚ್ ಎಂಜಿನ್ನಲ್ಲಿ ಶೋಧ ಮಾಡುವಂತೆ ಮಾಡಿದ ಬಳಿಕ ಮಾಹಿತಿ ಪೂರೈಕೆದಾರರಿಗೆ ಸೂಕ್ತ ರೀತಿಯ ಸಂಭಾವನೆ ಕೊಡಬೇಕು.
ಪತ್ರಿಕೋದ್ಯಮದ ಮುಂದಿನ ಬೆಳವಣಿಗೆ ಹಾಗೂ ವಿತ್ತೀಯ ಕ್ಷೇತ್ರದ ಭದ್ರತೆಗೆ ಇದು ಅನಿವಾರ್ಯ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಮತ್ತು ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಡಿಜಿಟಲ್ ನ್ಯೂಸ್ ಪಬ್ಲಿಶರ್ ಅಸೋಸಿಯೇಶನ್(ಡಿಎನ್ಪಿಎ) ವತಿಯಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ್ದ ಅವರು, “ಮಾಹಿತಿ ಪೂರೈಕೆದಾರರು ಮತ್ತು ದೊಡ್ಡ ತಂತ್ರಜ್ಞಾನ ಕಂಪನಿಗಳ ನಡುವಿನ ವ್ಯತ್ಯಾಸವನ್ನು ಸಮ ಸ್ಥಿತಿಗೆ ತರುವ ಅಗತ್ಯವಿದೆ,’ ಎಂದರು. ಸುದ್ದಿ ಕ್ಷೇತ್ರದ ಬೆಳವಣಿಗೆಗೆ ಇಂಥ ನಿಯಮ ಅಗತ್ಯವಾಗಿದೆ. ಮಾಹಿತಿಯನ್ನು ಒದಗಿಸುವವರ ಜತೆಗೆ ದೊಡ್ಡ ತಾಂತ್ರಿಕ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಆದಾಯದ ಹಂಚಿಕೆಯಾಗಬೇಕು ಎಂದರು.
“ಭಾರತ ತಂತ್ರಜ್ಞಾನದ ಉತ್ಪಾದನೆ ಮಾಡುವ ದೇಶವಾಗಿ ಹೊರಹೊಮ್ಮಬೇಕು. ನಮ್ಮ ದೇಶ ಕೇವಲ ಪ್ರತಿಭೆಗಳನ್ನು ಸೃಷ್ಟಿಸುವ ಸ್ಥಳ ಆಗಬಾರದು,’ ಎಂದು ಸಚಿವರು ಪ್ರತಿಪಾದಿಸಿದರು.
ಇದೇ ವೇಳೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, “ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ನ್ಯೂಸ್ ಕಂಟೆಂಟ್ ಕ್ರಿಯೇಟರ್ ಮತ್ತು ಸಂಗ್ರಹಕಾರರ ನಡುವೆ ನ್ಯಾಯಯುತ ಆದಾಯ ಹಂಚಿಕೆ ಖಚಿತಪಡಿಸಿಕೊಳ್ಳಲು ಕಾನೂನು ತಂದಿದ್ದು, ಆಯೋಗಗಳನ್ನು ಬಲಪಡಿಸಿವೆ,’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ