ನಿನಗಂತೂ ಬುದ್ಧಿ ಬರಲ್ಲ!
Team Udayavani, Oct 11, 2017, 7:20 AM IST
ಹೈದರಾಬಾದ್: ಹೆಲ್ಮೆಟ್ ಹಾಕದೇ ಮೂವರು ಮಕ್ಕಳನ್ನು ಹಾಗೂ ಪತ್ನಿಯನ್ನು ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿಕೊಂಡು ತೆರಳುತ್ತಿರುವ ವ್ಯಕ್ತಿಯ ಎದುರು ಪೋಲಿಸ್ ಅಧಿಕಾರಿಯೊಬ್ಬರು ಕೈಮುಗಿದು ನಿಂತಿರುವ ಚಿತ್ರ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯದ್ದು.
ಅಚ್ಚರಿಯ ಸಂಗತಿಯೆಂದರೆ ಕೆಲವೇ ಗಂಟೆಗಳ ಹಿಂದೆ ಹನುಮಂತರಾಯಪ್ಪ ಎಂಬಾತ ಟ್ರಾಫಿಕ್ ಉಲ್ಲಂಘನೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲ, ಚಿತ್ರದಲ್ಲಿ ಕೈಮುಗಿದು ನಿಂತಿರುವ ಸರ್ಕಲ್ ಇನ್ಸ್ಪೆಕ್ಟರ್ ಶುಭ ಕುಮಾರ್ ಅವರೇ ಹನುಮಂತ ರಾಯಪ್ಪಗೆ ಕಾರ್ಯಾಗಾರದಲ್ಲಿ ಟ್ರಾಫಿಕ್ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳನ್ನು ವಿವರಿಸಿದ್ದರು. ಆದರೆ ತರಬೇತಿ ಮುಗಿಸಿ ಹೊರಬರುತ್ತಲೇ ಎಲ್ಲವನ್ನೂ ಗಾಳಿಗೆ ತೂರಿ, ಹನುಮಂತರಾಯಪ್ಪ ಪತ್ನಿ ಹಾಗೂ 3 ಮಕ್ಕಳನ್ನು ಕರೆದುಕೊಂಡು ಬೈಕ್ನಲ್ಲಿ ಹೊರಟಿದ್ದರು. ಇದನ್ನು ನೋಡಿದ ಶುಭ ಕುಮಾರ್, ಇನ್ನು ಈ ವ್ಯಕ್ತಿಗೆ ಬುದ್ಧಿ ಹೇಳಲಾಗದು ಎಂದು ಕೈ ಮುಗಿದು ನಿಂತರು.
ಈ ವ್ಯಕ್ತಿ ಪದೇ ಪದೆ ಟ್ರಾಫಿಕ್ ನಿಯಮ ಉಲ್ಲಂ ಸುತ್ತಾರೆ. ಹಿಂದೆಯೂ ಹಲವು ಬಾರಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದನ್ನು ನೋಡಿ, ಎಚ್ಚರಿಸಿದ್ದೇನೆ. ಆದರೂ ಆತ ಬಗ್ಗಿಲ್ಲ ಎಂದಿದ್ದಾರೆ ಇನ್ಸ್ಪೆಕ್ಟರ್ ಶುಭ ಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ