ಗೆದ್ದ ಬಳಿಕ ಸೇವೆಯೊಂದಿಗೆ ಮಾತನಾಡುವೆ: ಜಗದೀಶ್ ಅಮೀನ್
Team Udayavani, Oct 19, 2019, 6:24 PM IST
ಮುಂಬಯಿ, ಅ. 18: ರಾಜ್ಯ ವಿಧಾನ ಸಭಾ ಚುನಾವಣೆಗೆ ಅಂಧೇರಿ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿಲ್ಲವ ಸಮುದಾಯದ ಧುರೀಣ, ಬಿಎಂಸಿ ನಗರ ಸೇವಕ ಜಗದೀಶ್ ಕುಟ್ಟಿ ಅಮೀನ್ ಅವರ ಗೆಲುವಿಗಾಗಿ ಬುಧವಾರ ರಾತ್ರಿ ಅಂಧೇರಿ ಪೂರ್ವದ ಮರೋಲ್ನ ಕುಮುದಾ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಸಮಾಲೋಚನಾ ಸಭೆ ನಡೆಯಿತು.
ರಾಜನಾಥ್ ನಾಡರ್ ಕನ್ಯಾ ಕುಮಾರಿ ಅವರ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅಮೀನ್ಅವರು ಮಾತನಾಡಿ, ನನ್ನ ಗೆಲುವಿಗಾಗಿ ಇಲ್ಲಿನ ದಕ್ಷಿಣ ಭಾರತೀಯ ಜನತೆ ಶ್ರಮಿಸುತ್ತಿದ್ದು ಮತದಾನದಲ್ಲೂ ಸಕ್ರಿಯರಾಗಬೇಕು. ನಾನು ಏನಿದ್ದರೂ ಚುನಾವಣೆಯ ಬಳಿಕ ಗೆಲುವಿನ ನಂತರ ದಕ್ಷ ಸೇವೆಯ ಮೂಲಕ ಮಾತನಾಡಲು ಇಚ್ಛಿಸುತ್ತೇನೆ. ಆ ಮುನ್ನ ತಾವೆಲ್ಲರೂ ತಮ್ಮವರೊಂದಿಗೆ ನನ್ನ ಗೆಲುವಿಗಾಗಿ ಸಕ್ರಿಯರಾಗಿರಿ ಎಂದುವಿನಂತಿಸಿದರು.
ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಉಪಾಧ್ಯಕ್ಷ ಶ್ರೀನಿವಾಸ ಆರ್. ಕರ್ಕೇರ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಂಬಯಿ ಪ್ರದೇಶ ಉಪಾಧ್ಯಕ್ಷ ಲಕ್ಷ್ಮಣ್ ಎಸ್. ಪೂಜಾರಿ, ಭಾರತೀಯ ಕಲೂcರಿ ಜೈಸ್ವಲ್ ಸಂಬರ್ಗೆ ಮಹಾಸಭಾ ಅಧ್ಯಕ್ಷ ಲಾಲ್ ಚಂದ್ರ ಗುಪ್ತ ಉಪಸ್ಥಿತರಿದ್ದರು. ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮೀನ್ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ