ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಘಟಕದಿಂದ ಬಸವ ಜಯಂತಿ ಕಾರ್ಯಕ್ರಮ
Team Udayavani, May 13, 2021, 11:16 AM IST
ಲಂಡನ್: ಜಾಗತಿಕ ಲಿಂಗಾಯತ ಮಹಾಸಭಾದ ಸಾಗರೋತ್ತರ ಘಟಕದಿಂದ 888ನೇ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆನ್ ಲೈನ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.
ಮೇ.14ರಂದು ಭಾರತೀಯ ಕಾಲಮಾನ ಪ್ರಕಾರ ಸಂಜೆ ಆರು ಗಂಟೆಗೆ ಆರಂಭವಾಗಲಿದೆ.
ಸಾಣೆಹಳ್ಳಿ ಶ್ರೀ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಜಾ.ಅಂ.ಮ.ಸ. ಬೆಂಗಳೂರು ಇದರ ಮಹಾಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್ ಅವರು ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಯಾಗಿ ಬೆಂಗಳೂರು ಮಾಜಿ ಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ ಭಾಗವಹಿಸಲಿದ್ದಾರೆ.
ಆದರ್ಶ ಸುಗಮ ಸಂಗೀತ ತಂಡ, ವಿದ್ಯಾ ಮಗದುಮ, ಪಾವನಿ ಭಾರದ್ವಾಜ ಹಾಗೂ ವಿಶಾಲ ಆರಾಧ್ಯ ಅವರು ವಚನ ಗಾಯನ ಮಾಡಲಿದ್ದಾರೆ.
ಜೂಮ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸಬಹುದಾಗಿದ್ದು, 82109464913 ಐಡಿ ಮತ್ತು 958725 ಪಾಸ್ ವರ್ಡ್ ಬಳಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆ – ಸಾಗರೋತ್ತರ ಘಟಕ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.